ಮಂಗಳೂರು:ವಕ್ಫ್ ಕಾಯ್ದೆ ಪ್ರತಿಭಟನೆಯಲ್ಲಿ ಎಸಿಪಿ ಕಾರು ಬಳಕೆ ವಿವಾದ, ತನಿಖೆಗೆ ಆದೇಶ

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರು-ಬೆಂಗಳೂರು ಹೆದ್ದಾರಿ ಸಂಪೂರ್ಣವಾಗಿ ಸ್ಥಗಿತಗೊಂಡ ಸಂದರ್ಭ, ಎಸಿಪಿ ನಜ್ಮಾ ಫಾರೂಕಿ ಅವರಿಗೆ ಸೇರಿದ ಸರ್ಕಾರಿ ಕಾರಿನಲ್ಲಿ ಕೆಲ ಪ್ರತಿಭಟನಾಕಾರರಿಗೆ ಡ್ರಾಪ್ ನೀಡಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ.
ಹೈಕೋರ್ಟ್ ಆದೇಶದ ಹೊರತಾಗಿಯೂ ಪ್ರತಿಭಟನಾಕಾರರು ಹೆದ್ದಾರಿಯನ್ನು ಬ್ಲಾಕ್ ಮಾಡಿದ್ದು, ಆಂಬುಲೆನ್ಸ್ ಸೇರಿ ಹಲವು ವಾಹನಗಳು ಟ್ರಾಫಿಕ್ ಜಾಮ್ನಿಂದ ಪರದಾಡುತ್ತಿದ್ದವು. ಇಂತಹ ಸಂದರ್ಭದಲ್ಲಿ, ಸಾರ್ವಜನಿಕರ ಸೇವೆಗೆ ಬಳಸಬೇಕಾದ ಪೊಲೀಸ್ ಕಾರು ಪ್ರತಿಭಟನಾಕಾರರನ್ನು ಡ್ರಾಪ್ ಮಾಡುವಲ್ಲಿ ತೊಡಗಿದುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ.
ಸರ್ಕಾರಿ ವಾಹನಗಳನ್ನು ಈ ರೀತಿ ಕ್ಯಾಬ್ ಸೇವೆಯಂತೆ ಬಳಸಬಾರದು ಎಂಬುದು ಸಾರ್ವಜನಿಕರ ಆಕ್ರೋಶಗಿದೆ. ಸಾರ್ವಜನಿಕ ಸೇವೆಗಳಿಗೆ ಮೀಸಲಾಗಿರುವ ವಾಹನಗಳು, ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಬದಲು, ನಿರ್ದಿಷ್ಟ ಗುಂಪಿಗೆ ಸೌಲಭ್ಯ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.