Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು ನಗರದ ರಸ್ತೆಗಳಾಯಿತು ನೀರಿನ ಕಾಲುವೆ

Spread the love

ಮಂಗಳೂರು:ಕರಾವಳಿ ನಗರಿ ಮಂಗಳೂರಿನಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಈಗ ರೋಡ್ ಇಲ್ಲ ಎಲ್ಲಾ ತೋಡು ಎಂಬಂತಾಗಿದೆ ಪರಿಸ್ಥಿತಿ.

ಮೊನ್ನೆಯಿಂದ ಎಡೆಬಿಡದೇ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಬಹುತೇಕ ರಸ್ತೆಗಳು ಜಲಾವೃತವಾಗಿದೆ.

ಅದರಲ್ಲೂ ಮಂಗಳೂರಿನ ಪ್ರಮುಖ ಭಾಗವೆಂದೇ ಪರಿಗಣಿಸಲ್ಪಡುವ ಪಂಪ್ ವೆಲ್ ಫ್ಲೈ ಓವರ್ ಈಗ ಮಳೆ ನೀರಿನಲ್ಲಿ ತೇಲಾಡುತ್ತಿದೆ.

ಹವಾಮಾನ ವರದಿ ಪ್ರಕಾರ ಮೂರು ದಿನಗಳ ದಕ್ಷಿಣ ಕನ್ನಡದಲ್ಲಿ ವಿಪರೀತ ಮಳೆಯಾಗಲಿದೆ. ಅದರಂತೆ ಇಂದೂ ಕೂಡಾ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಇಂದು ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಅದರಲ್ಲೂ ವಿಶೇಷವಾಗಿ ಮಂಗಳೂರಿನ ಬಹುತೇಕ ರಸ್ತೆಗಳು ನೀರಿನಲ್ಲಿ ತೆಲಾಡುತ್ತಿವೆ. ಪಂಪ್ ವೆಲ್, ಜ್ಯೋತಿ ಸರ್ಕಲ್ ನಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಇದರಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಮಂಗಳೂರಿನ ಪರಿಸ್ಥಿತಿ ಟ್ರೋಲ್ ಆಗುತ್ತಿದೆ. ಮಂಗಳೂರಿನಲ್ಲಿ ಬೇಸಿಗೆಯಲ್ಲಿ ಕಡಲು ನೋಡಲು ನಾವೇ ಹೋಗಬೆಕು, ಆದರೆ ಮಳೆಗಾಲದಲ್ಲಿ ಕಡಲೇ ನಮ್ಮನ್ನು ನೋಡಲು ಬರುತ್ತದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *