Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಯುವಕನ ಮೇಲೆ ತಲ್ವಾರ್ ದಾಳಿ, ಪಂಜಿಮೊಗರು ಪ್ರದೇಶದಲ್ಲಿ ಆತಂಕ!

Spread the love

ಮಂಗಳೂರು :ಮಂಗಳೂರು ನಗರದ ಹೊರವಲಯ ಬಜಪೆಯಲ್ಲಿ ನಡೆದ ಹಿಂದು ಕಾರ್ಯಕರ್ತ ಸುಹಾಸ್ ಹತ್ಯೆಯ ಬೆನ್ನಿಗೇ ಕರಾವಳಿಯಲ್ಲಿ ಶಾಂತಿ ಕದಡಿದ್ದು, ತೊಕ್ಕೊಟ್ಟು, ಕಣ್ಣೂರು ಹಾಗೂ ಅತ್ರಾಡಿಯಲ್ಲಿ ನಡೆದ ಅಹಿತಕರ ಘಟನೆಯ ಬಳಿಕ ನಗರದ ಪಂಜಿಮೊಗರು ಪರಿಸರದಲ್ಲಿ ಮತ್ತೋರ್ವ ಯುವಕನ ಮೇಲೆ ತಲವಾರು ದಾಳಿ ನಡೆದಿದೆ.

ಸ್ಥಳೀಯರ ಮಾಹಿತಿಗಳ ಪ್ರಕಾರ ಇಬ್ಬರು ದುಷ್ಕರ್ಮಿಗಳು ತಲ್ವಾರ್ ಹಿಡಿದು ಯುವಕನನ್ನು ಅಟ್ಟಾಡಿಸಿದ್ದಾರೆ. ತಲ್ವಾರ್ ಬೀಸಿದ ತಕ್ಷಣ ಯುವಕ ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಘಟನೆ ಯ ಬಗ್ಗೆ ಮಾಹಿತಿ ಸಿಗುತ್ತಲೇ ಕಾವೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *