ಹೆಂಡತಿ ಓಡಿ ಹೋದರು ಚಿಂತೆ ಇಲ್ಲ ನನ್ನ ಕೊಲೆ ಮಾಡದಿದ್ದರೆ ಸಾಕು ಎಂದು ಮೊರೆ ಇಟ್ಟ ಗಂಡ

ಮಧ್ಯಪ್ರದೇಶ:ರಾಜ್ಯದ ನರಸಿಂಗ್ಪುರ ಜಿಲ್ಲೆಯ ಪ್ರತಾಪ್ ನಗರದ ನಿವಾಸಿ ಪಾರ್ಶು ಠಾಕೂರ್, ತಮ್ಮ ಪತ್ನಿ ರಜನಿ ಬಾಯಿ ಠಾಕೂರ್ ಕಾಣೆಯಾದ ನಂತರ ರಕ್ಷಣೆಗಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ತನ್ನ ಪತ್ನಿ ಮನೆಯಲ್ಲಿದ್ದ ಆಭರಣಗಳೊಂದಿಗೆ ಕಳೆದ ಒಂದು ತಿಂಗಳ ಹಿಂದೆ ಓಡಿ ಹೋಗಿದ್ದಾಗಿ ತಿಳಿಸಿದ್ದಾರೆ.
ಪಾರ್ಶು ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಅವರಲ್ಲಿ ಒಬ್ಬ 12 ವರ್ಷದ ಮಗ ಮತ್ತು ಇನ್ನೊಬ್ಬ 9 ವರ್ಷದ ಮಗ. ಅವರ ಕುಟುಂಬ ಮತ್ತು ಮಕ್ಕಳ ಭವಿಷ್ಯದ ಜವಾಬ್ದಾರಿ ಅವರ ಮೇಲಿದೆ, ಆದರೆ ಈಗ ತಮ್ಮ ಜೀವಕ್ಕೆ ಅಪಾಯವಿದೆ ರಕ್ಷಣೆ ನೀಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಈ ಕುರಿತು ಮಾತನಾಡಿರುವ ಪಾರ್ಶು, ನಾನು ನನ್ನ ಹೆಂಡತಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಸಿದ್ಧನಿದ್ದೇನೆ. ಅವಳು ಯಾರೊಂದಿಗಾದರೂ ಸಂತೋಷದಿಂದ ಬದುಕಲಿ. ಆದರೆ ಮುಂದೆ ಒಂದು ದಿನ ಬಂದು ನನ್ನೊಂದಿಗೆ ವಾಸಿಸಲು ಬಯಸಿದರೆ ನಾನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ..
ಈ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟಿರುವ ಪಾರ್ಶು, ಎಲ್ಲಿ ಇಂದೋರ್ನಲ್ಲಿ ನಡೆದ ಘಟನೆಯಂತೆ ತನ್ನ ಹೆಂಡತಿ ತನ್ನನ್ನು ಕೊಂದು ಬಿಡುತ್ತಾಳೋ ಅಂತ ಹೆದರಿದ್ದಾನಂತೆ.. ರಾಜಾಗೆ ಸಂಭವಿಸಿದ ಸ್ಥಿತಿ ತನಗೂ ಆಗುತ್ತದೆ ಎಂದು ಭಯಪಡುತ್ತಿದ್ದಾನೆ. ಇದರಿಂದ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾನೆ ಎಂದು ತಿಳಿದು ಬಂದಿದೆ.