ಭಕ್ತಿ ತೋರಲು ಹೋಗಿ ಮದ್ಯದ ನಶೆಯಲ್ಲಿ ಗಣೇಶ ವಿಗ್ರಹ ವಿರೂಪಗೊಳಿಸಿದ ವ್ಯಕ್ತಿ

ಬೆಂಗಳೂರು:ಕುಡಿದು ಬಂದು ಗಣೇಶನಿಗೆ ಭಕ್ತಿ ತೋರಿಸಿ ಬಳಿಕ ವಿಗ್ರಹವನ್ನೆ ವ್ಯಕ್ತಿ ವಿರೂಪಗೊಳಿಸಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಘಟನೆ ಸಂಬಂಧ ಶಿವು ಎಂಬಾತನನ್ನು ಬೊಮ್ಮನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗರ್ವೇಭಾವಿಪಾಳ್ಯದ ಖಾಸಗಿ ಬಿಲ್ಡಿಂಗ್ ಬಳಿ ಗಣೇಶ ವಿಗ್ರಹ ಇರಿಸಲಾಗಿತ್ತು.
ಬಿಲ್ಡಿಂಗ್ ಮುಂಭಾಗದಲ್ಲಿ 2 ಅಡಿ ಎತ್ತರದ ಕಲ್ಲಿನ ವಿಗ್ರಹ ಪ್ರತಿಷ್ಠಾಪನೆಯಾಗಿತ್ತು. ಕಳೆದ 24 ರಂದು ಬೆಳಗ್ಗೆ ಸ್ಥಳೀಯರು ನೋಡಿದಾಗ ವಿಗ್ರಹ ವಿರೂಪವಾಗಿತ್ತು. ವಿಗ್ರಹದ ಎಡ ಕಿವಿ ಮತ್ತು ಎಡ ಕೈ ಭಾಗಗಳು ಹಾನಿಯಾಗಿತ್ತು. ಕಿಡಿಗೇಡಿಗಳು ವಿಗ್ರಹ ವಿರೂಪಗೊಳಿಸಿದ್ದಾರೆಂದು ಸ್ಥಳೀಯರು ದೂರು ನೀಡಿದ್ದಾರೆ. ನಂತರ ಪರಿಶೀಲನೆ ನಡೆಸಿದಾಗ ಶಿವು ವಿನಿಂದ ಕೃತ್ಯ ನಡೆದಿರೋದು ಬೆಳಕಿಗೆ ಬಂದಿದೆ.
ಹಿಂದಿನ ದಿನ ರಾತ್ರಿ ಕುಡಿದು ಬಿಲ್ಡಿಂಗ್ ಬಳಿ ಆರೋಪಿ ಶಿವು ಬಂದಿದ್ದ. ಈ ವೇಳೆ ಗಣೇಶ ಮೂರ್ತಿಗೆ ಕೈ ಮುಗಿದು ಭಕ್ತಿ ತೋರಲು ಹೋಗಿದ್ದ.ಮದ್ಯಪಾನ ಮಾಡಿ ದೇವರಿಗೆ ಕೈಮುಗಿಯಲು ಹೋಗಿ ಆಯತಪ್ಪಿ ಬಿದ್ದಿದ್ದಾನೆ. ದೂರಿನ ಆಧಾರದ ಮೇಲೆ ಶಿವುವನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೇ.
