ಆಸ್ತಿಗಾಗಿ ಪ್ರೇಮಿಯನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರೇಯಸಿ: ಒಡಿಶಾದ ಗಂಜಾಂನಲ್ಲಿ ಭಯಾನಕ ಘಟನೆ!

ಒಡಿಶಾ: ಆಸ್ತಿಗಾಗಿ ವೃದ್ಧ ಭೂಮಾಲೀಕರನ್ನು ಸುಟ್ಟು ಕೊಂದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಿದ ಘಟನೆ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.
ಸುದೇಶ್ನಾ ಜೆನಾ(57) ಎಂಬಾಕೆ ಹರಿಹರ್ ಸಾಹು(72) ಎಂಬ ಭೂಮಾಲೀಕರನ್ನು ಸುಟ್ಟು ಕೊಂದಿದ್ದಾರೆ. ಜೆನಾ ಮತ್ತು ಸಾಹು ನಡುವೆ ಐದು ವರ್ಷಗಳಿಂದ ಸಂಬಂಧವಿತ್ತು.
ಜೆನಾ ಅವರು ಸಾಹು ಮಲಗಿದ್ದಾಗ ಆಸ್ತಿಗಾಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸಾಹು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆಸ್ತಿಗೋಸ್ಕರವೇ ಈ ಕೊಲೆ ನಡೆದಿದೆ
ಸುದೇಶ್ನಾ ಜೆನಾ ಮತ್ತು ಹರಿಹರ್ ಸಾಹು ನಡುವೆ ಐದು ವರ್ಷಗಳಿಂದ ಸಂಬಂಧವಿತ್ತು. ಸಾಹು ನಿವೃತ್ತ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದರು. ಜೆನಾ ವಿಧವೆಯಾಗಿದ್ದರು. ಆಸ್ತಿಗೋಸ್ಕರವೇ ಈ ಕೊಲೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶರವಣ ವಿವೇಕ್ ಎಂ ಅವರು ಹೇಳಿದರು.
ಗುರುವಾರ(ಮೇ.29) ಮುಂಜಾನೆ ಸಾಹು ಮಲಗಿದ್ದಾಗ ಸುದೇಶ್ನಾ ಜೆನಾ ಅವರ ಕೋಣೆಗೆ ನುಗ್ಗಿದ್ದಾರೆ. ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಕೂಡಲೇ ಅವರನ್ನು ಬೆರ್ಹಾಂಪುರದ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಕೂಡಲೆ ಅವರನ್ನು ಕಟಕ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಸೀಮೆಎಣ್ಣೆ ಸುರಿದು ರಕ್ಷಿಸುವ ನಾಟಕ
“ಆಕೆ ಯೋಜಿತ ರೀತಿಯಲ್ಲಿ ಆಸ್ತಿಗಾಗಿ ತನ್ನ ಪ್ರಿಯಕರನನ್ನೇ ಕೊಲೆ ಮಾಡಿದ್ದಾಳೆ. ಸಾಕ್ಷ್ಯಗಳನ್ನು ಮರೆಮಾಚಲು ಪ್ರಯತ್ನಿಸಿದ್ದಾಳೆ” ಎಂದು ಅಧಿಕಾರಿ ವಿವೇಕ್ ತಿಳಿಸಿದ್ದಾರೆ.
ಜೆನಾ ಅವರು ಸಾಹು ಅವರ ಮೊಬೈಲ್ ಫೋನ್, ಸೀಮೆಎಣ್ಣೆ ಬಾಟಲಿಯನ್ನು ಬೆಂಕಿಗೆ ಎಸೆದಿದ್ದಾರೆ. ಅಷ್ಟೇ ಅಲ್ಲದೆ, ಇಬ್ಬರು ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ, ನೆರೆಹೊರೆಯವರ ಸಹಾಯದಿಂದ ಸಾಹುವನ್ನು ರಕ್ಷಿಸುವ ನಾಟಕವಾಡಿದ್ದಾರೆ. ಆದರೆ, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ. ಆಸ್ತಿಗಾಗಿ ಸುದೇಶ್ನಾ ಜೆನಾ ಅವರೇ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಆಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.
ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲ ಎಂದು ಪತ್ನಿ ಕೊಲೆಗೆ ಯತ್ನ
46 ವರ್ಷದ ದಿನೇಶ್ ಅವ್ಹಾದ್ ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಬಯಸಿದ್ದನು. ಆದರೆ ಆಕೆ ಕೆಲಸಕ್ಕೆ ಹೋಗಲು ತಡವಾಗುತ್ತಿದೆ ಎಂದು ಹೇಳಿ ನಿರಾಕರಿಸಿದಳು. ಇದರಿಂದ ಕುಪಿತಗೊಂಡ ಆತ ಜಗಳ ತೆಗೆದಿದ್ದಾನೆ. ಗಲಾಟೆ ತಾರಕ್ಕೇರಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರ್ಸಿಎಫ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತ ಮಹಿಳೆ ಮನೆ ಕೆಲಸ ಮಾಡುತ್ತಿದ್ದಳು. ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಕಾರಣ ಜಗಳವಾಗಿದೆ. ಜಗಳದ ಮಧ್ಯೆ ಆಕೆ ಸೀಮೆಎಣ್ಣೆ ಸುರಿದುಕೊಂಡಿದ್ದಾಳೆ. ಬೆಂಕಿ ಹಚ್ಚಲು ಸಾಧ್ಯವಾಗದಿದ್ದಾಗ, ದಿನೇಶ್ ಗ್ಯಾಸ್ ಸ್ಟವ್ನಿಂದ ಕಾಗದಕ್ಕೆ ಬೆಂಕಿ ಹಚ್ಚಿ ಆಕೆಯ ಮೇಲೆ ಎಸೆದಿದ್ದಾನೆ. ಇದರಿಂದ ಆಕೆಗೆ ಗಂಭೀರ ಗಾಯಗಳಾಗಿವೆ. ಆಕೆಯನ್ನು ಸಿಯೋನ್ ಆಸ್ಪತ್ರೆಗೆ ದಾಖಲಿಸಲಾಗಿದೆ.