ಅಡ್ಡೂರು ಸೇತುವೆ ಕಾಮಗಾರಿಯಲ್ಲಿ ನೀರಿಗೆ ಉರುಳಿದ ಲಾರಿ

ಮಂಗಳೂರು : ಬಂಟ್ವಾಳ ತಾಲೂಕಿನ ಪೊಳಲಿ ಫಲ್ಗುಣಿ ನದಿಯಲ್ಲಿ ಅಡ್ಡೂರು ಸೇತುವೆ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಸೇತುವೆಯ ಕೆಳಭಾಗದಲ್ಲಿ ಕಾಮಗಾರಿ ಮುಂದುವರಿದಿದ್ದು, ಇಲ್ಲಿ ಬೃಹತ್ ಗಾತ್ರದ ಟಿಪ್ಪರ್ ಲಾರಿಗಳ ಮೂಲಕ ಮಣ್ಣು ಸಾಗಿಸುವ ಕೆಲಸ ನಡೆಯುತ್ತಿದೆ.
ಪೊಳಲಿ ಸೇತುವೆ ಬಿರುಕು ಕಾಣಿಸಿಕೊಂಡ ಕಾರಣದಿಂದ ಘನವಾಹನಗಳ ಸಂಚಾರ ನೀಷೆಧಿಸಲಾಗಿತ್ತು. ಬಸ್ ಗಳ ಸಂಚಾರಕ್ಕಾಗಿ ಇದೀಗ ನದಿಗೆ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ.
ನದಿಯ ಕೆಳಭಾಗದಲ್ಲಿ ಭಾರೀ ಗಾತ್ರದ ವಾಹನಗಳ ಮೂಲಕ ಕಾಮಗಾರಿ ನಡೆಯುತ್ತಿದೆ. ಇದರ ನಡೆವೆ ಕಾಮಗಾರಿಗೆ ಮಣ್ಣು ಸಾಗಿಸುವ ಕೆಲಸ ನಡೆಯುತ್ತಿದ್ದು, ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮಣ್ಣು ಸಾಗಾಟದ ಟಿಪ್ಪರ್ ಲಾರಿಯೊಂದು ರಸ್ತೆ ಪಕ್ಕದ ನೀರಿಗೆ ಉರುಳಿ ಬಿದ್ದಿದೆ. ಉರುಳಿ ಬೀಳುವ ಸಂದರ್ಭದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಸಕಾಲಿಕ ಪ್ರಜ್ಞೆಯಿಂದ ಎಚ್ಚೆತ್ತು ಹೊರಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತುವ ಕೆಲಸವನ್ನು ರಾತ್ರಿ ವೇಳೆ ಮಾಡಲಾಗಿದೆ.