ಜೀವನಕ್ಕೂ ಮೌಲ್ಯ ಇದೆ: ಶನಿವಾರ ಕೆಲಸಕ್ಕೆ ‘ಇಲ್ಲ’ ಎಂದ ಯುವತಿಯ ಧೈರ್ಯಕ್ಕೆ ಹೆಚ್ಆರ್ ಮೆಚ್ಚುಗೆ

ಕೆಲಸವಿಲ್ಲದೆ ಅದೆಷ್ಟೋ ಮಂದಿ ಕಂಪನಿಯಿಂದ ಕಂಪನಿಗೆ ಅಲೆದಾಡುತ್ತಿದ್ದಾರೆ. ಕೆಲವರಂತೂ ತಾವು ಓದಿರುವ ವಿದ್ಯೆಗೂ ಮಾಡುತ್ತಿರುವ ಕೆಲಸಕ್ಕೆ ಸಂಬಂಧವೇ ಇಲ್ಲ! ಇಂತಹವರ ಮಧ್ಯೆ ಲಕ್ಷಾಂತರ ಉದ್ಯೋಗಿಗಳು ಒತ್ತಡ ಎಂಬ ಸಮುದ್ರದಲ್ಲಿ ಹರಸಾಹಸಪಟ್ಟು ಈಜಿ ಹೇಗೋ ದಡ ಸೇರುತ್ತಿದ್ದಾರೆ.
ಏಕೆಂದರೆ ಅಷ್ಟರಮಟ್ಟಿಗೆ ಒತ್ತಡ ಉದ್ಯೋಗಿಗಳನ್ನು ಕಾಡುತ್ತಿದೆ. ಅದರಲ್ಲೂ ಐಟಿ-ಬಿಟಿ ಕಂಪನಿಗಳಲ್ಲೇ ಇದು ಹೆಚ್ಚು ಕಾಣಸಿಗುತ್ತದೆ. ರಾತ್ರಿ-ಹಗಲು ಕಂಪನಿಗೋಸ್ಕರ ಸೇವೆ ಸಲ್ಲಿಸುತ್ತಾ ತಮ್ಮ ಸರ್ವಸ್ವವನ್ನೂ ಮುಡಿಪಾಗಿಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಶನಿವಾರವೂ ಕೆಲಸ ಮಾಡಬೇಕು ಎಂದು ಹೇಳಿದ್ದಕ್ಕೆ ಜಾಬ್ ಆಫರ್ ಅನ್ನೇ ತಿರಸ್ಕರಿಸಿದ್ದಾರೆ! ಅಚ್ಚರಿ ವಿಷಯ ಏನೆಂದರೆ ಈ ಮಹಿಳೆ ನಿರ್ಧಾರಕ್ಕೆ ಕಂಪನಿಯ ಹೆಚ್ಆರ್ ಶ್ಲಾಘಿಸಿದ್ದಾರೆ.
ಸಾಂದರ್ಭಿಕ ಶನಿವಾರದ ದಿನಗಳಲ್ಲಿ ಕೆಲಸ ಮಾಡಬೇಕಾದ ಕೆಲಸದ ಪ್ರಸ್ತಾಪ ತಿರಸ್ಕರಿಸಿದ ಜನರಲ್ ಝಡ್ ಅಭ್ಯರ್ಥಿಯನ್ನು ಲಿಂಕ್ಡ್ಇನ್ನಲ್ಲಿ ಶ್ಲಾಘಿಸಿದ ಎಚ್ಆರ್ ಪೋಸ್ಟ್ ಗಮನ ಸೆಳೆಯುತ್ತಿದೆ. ಫಸ್ಟ್ಸೋರ್ಸ್ ಟ್ಯಾಲೆಂಟ್ ಅಕ್ವಿಸಿಷನ್ ಸ್ಪೆಷಲಿಸ್ಟ್ ರಿಯಾ ದಧಿಚ್ ಅವರು 25 ವರ್ಷದ ಯುವತಿಯೊಂದಿಗೆ ನಡೆಸಿದ ಸಂದರ್ಶನದ ಕುರಿತ ಅನುಭವವನ್ನು ಹಂಚಿಕೊಂಡಿದ್ದಾರೆ. ಯುವತಿ ಹೇಳಿದ ಪ್ರತಿ ಮಾತು ಹೆಚ್ಆರ್ಗೆ ಇಷ್ಟವಾಗಿದ್ದು, ಆ ಮಾತುಗಳಿಗೆ ಪ್ರಭಾವಿತರಾಗಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ತಾನು ಕೇಳುವ ಸಾಮಾನ್ಯ ಒಂದೇ ದೂರಿನ ಕುರಿತು ಒಪ್ಪಿಕೊಂಡಿರುವ ದಧಿಚ್, ಯುವತಿ ಜೊತೆಗಿನ ಸಂಪೂರ್ಣ ಸಂವಹನದ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಯುವತಿ ಹೇಳಿದ ಮಾತುಗಳು ಡೈಮಂಡ್ನಂತಿವೆ.
‘ಜನರೇಷನ್ ಝಡ್ (1995-2012 ಮಧ್ಯೆ ಜನಿಸಿದವರು) ಮಕ್ಕಳಿಗೆ ತಾಳ್ಮೆ ಇಲ್ಲ, ನಿಷ್ಠೆ ಇಲ್ಲ, ಹಸಿವು ಇಲ್ಲ’ ಎನ್ನುತ್ತಾರೆ. ಆದರೆ ಯುವತಿ ಜೊತೆಗಿನ ಸಂವಹನದ ಹೆಚ್ಆರ್ ದೃಷ್ಟಿಕೋನವೇ ಬದಲಾಗಿದೆ. ಕೆಲವೊಮ್ಮೆ ಶನಿವಾರವೂ ಕೆಲಸ ಮಾಡಲು ನೀವು ಮುಕ್ತರಾಗಿದ್ದೀರಾ ಎಂದು ಹೆಚ್ಆರ್ ಕೇಳಿದಾಗ, ಅಭ್ಯರ್ಥಿಯು ಈ ಆಫರ್ ರಿಜೆಕ್ಟ್ ಮಾಡಿದರು. ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡಲು ಬದ್ಧನಾಗಿದ್ದೇನೆ. ಹಾಗಂತ 30ರೊಳಗೆ (ವಯಸ್ಸು) ನನ್ನನ್ನು ಸುಡುವ ವೃತ್ತಿಜೀವನವನ್ನು ನಾನು ಬಯಸುವುದಿಲ್ಲ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಈ ಹೇಳಿಕೆಯಿಂದ ತನಗೆ ಆರಂಭದಲ್ಲಿ ‘ಕಿರಿಕಿರಿ’ ಅನುಭವಿಸಿದ್ದನ್ನು ದಧಿಚ್ ಒಪ್ಪಿಕೊಂಡಿದ್ದಾರೆ. ತಕ್ಷಣ ಕಿರಿಕಿರಿ ಅನುಭವಿಸಿದರೂ ನಂತರ ಇದನ್ನು ಅರ್ಥ ಮಾಡಿಕೊಂಡರಂತೆ!
ಹೆಚ್ಆರ್ ಹೇಳಿರುವುದೇನು?
ಯುವತಿ ಹೇಳಿದ ಮಾತುಗಳಿಗೆ ಪ್ರಭಾವಿತರಾದ ಹೆಚ್ಆರ್ ಪ್ರಭಾವಿತರಾಗಿದ್ದಾರೆ. ಅನೇಕ ಉದ್ಯೋಗಿಗಳು, ವಿಶೇಷವಾಗಿ ಹಳೆಯ ತಲೆಮಾರಿನವರು ದೀರ್ಘಕಾಲದಿಂದ ಅನುಭವಿಸಿದ್ದನ್ನು ಎಂದಿಗೂ ವ್ಯಕ್ತಪಡಿಸದಿರುವುದನ್ನು ಹೇಳುವ ಧೈರ್ಯವನ್ನು ಅಭ್ಯರ್ಥಿ ಹೊಂದಿದ್ದಾರೆ ಎಂದು ಅವರು ಬರೆದಿದ್ದಾರೆ. ‘ನಮ್ಮಲ್ಲಿ ಅನೇಕರಿಗೆ ಎಂದಿಗೂ ಸಾಧ್ಯವಾಗದದ್ದನ್ನು ಹೇಳುವ ಧೈರ್ಯ ಆಕೆಗೆ ಇತ್ತು. ಹೀಗೆ ನೇರವಾಗಿ ಇದ್ದದ್ದನ್ನು ಹೇಳಲು ನಾವು ಮೌನಕ್ಕೆ ಜಾರಿದ್ದೇವೆ. ನಗುವುದನ್ನು ಮರೆತಿದ್ದೇವೆ. ನಾವು ಇಲ್ಲ ಎನ್ನುವ ಮಾತನ್ನು ಹೇಳಲು ರೂಡಿಸಿಕೊಳ್ಳಬೇಕು. ಈಗ ಇದೇ ಮಾತನ್ನು ಆಕೆ ಹೇಳಿದಳು. ಇದು ಈ ಪೀಳಿಗೆಯ ಸಮಸ್ಯೆ ಅಲ್ಲ. ಬಹುಶಃ ಇದು ನಾವು ಉಳಿದುಕೊಂಡಿರುವ (ಯಾರೂ ಮಾತನಾಡದೆ) ಸಂಸ್ಕೃತಿಯಾಗಿರಬಹುದು. ಆಕೆ ಮಾತು ನಿಜವಾಗಲೂ ನನ್ನನ್ನು ಮಂತ್ರಮುಗ್ದರನ್ನಾಗಿಸಿತು. ಆರಂಭದಲ್ಲಿ ಕಿರಿಕಿರಿ ಎನಿಸಿದರೂ ಇದೇ ಸತ್ಯ ಎನ್ನುವುದನ್ನು ಒಪ್ಪಿಕೊಂಡೆ ಎಂದು ಅವರು ಬರೆದಿದ್ದಾರೆ.
ನೆಟ್ಟಿಗರು ಬಗೆಬಗೆ ಕಾಮೆಂಟ್
ಈ ಪೋಸ್ಟ್ ಮಾನಸಿಕ ಆರೋಗ್ಯ, ಕೆಲಸ-ಜೀವನ ಸಮತೋಲನ ಮತ್ತು ಕೆಲಸದ ಸ್ಥಳದಲ್ಲಿ ಮಹತ್ವಾಕಾಂಕ್ಷೆಯ ಬದಲಾಗುತ್ತಿರುವ ವ್ಯಾಖ್ಯಾನಗಳ ಬಗ್ಗೆ ವಿಶಾಲವಾದ ಸಂಭಾಷಣೆಯನ್ನು ತೆರೆಯಿತು. ಇದಕ್ಕೆ ಒಬ್ಬರು ಕಾಮೆಂಟ್ ಹಾಕಿದ್ದು, ‘ಇದು ತುಂಬಾ ಸಾಪೇಕ್ಷವಾಗಿದೆ. ನನಗೆ ಇದೇ ರೀತಿಯ ಕೆಲಸ ನೀಡಲಾಗಿತ್ತು. 6 ದಿನಗಳ ಕೆಲಸ, ವಾರಾಂತ್ಯದ ರಜೆಯೂ ಕೊಡಲಿಲ್ಲ. ಕೆಲಸ ಮತ್ತು ಆರೋಗ್ಯ ಎರಡೂ ಮುಖ್ಯ. ಕೆಲಸ-ಜೀವನ ಸಮತೋಲನವನ್ನು ಗೌರವಿಸುವ ಕೆಲಸವನ್ನು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಹೀಗೆ ಹಲವರು ಕೆಲಸ ಮತ್ತು ಆರೋಗ್ಯದ ಸಮತೋಲನದ ಕುರಿತು ಬಗೆಬಗೆಯಾಗಿ ಕಾಮೆಂಟ್ಗಳಲ್ಲಿ ಹಾಕಿದ್ದಾರೆ.