ಕೆ.ಆರ್. ಪುರಂನಿಂದ ಆಟೋದಲ್ಲಿ ಅಪಹರಿಸಿ ಬೊಮ್ಮನಹಳ್ಳಿಗೆ ಕರೆತಂದು ಕೃತ್ಯ; ಪ್ರೀತಿ, ಚಿನ್ನಿ ಮತ್ತು ತಂಡದಿಂದ ಹಲ್ಲೆ.

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ತೃತೀಯ ಲಿಂಗಿಯೊಬ್ಬರನ್ನು ತಲೆ ಬೋಳಿಸಿರುವಂತ ತೃತೀಯ ಲಿಂಗಿಯರ ತಂಡವೇ, ಮನಸೋ ಇಚ್ಛೆ ಥಳಿಸಿ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನ ಬೊಮ್ಮನಹಳ್ಳಿಯ ವಿರಾಟ ನಗರದಲ್ಲಿ ಈ ಘಟನೆ ನಡೆದಿದೆ. ತೃತೀಯ ಲಿಂಗಿಯಾಗಿದ್ದಂತ ಸುಕನ್ಯಾರನ್ನು ಆಟೋದಲ್ಲಿ ಅಪಹರಿಸಿ ಹಲ್ಲೆ ಮಾಡಲಾಗಿದೆ. ಬೇರೊಂದು ತಂಡದ ಜೊತೆಗೆ ಹೋಗಿದ್ದಕ್ಕೆ ತೃತೀಯ ಲಿಂಗಿಗಳಾದಂತ ಪ್ರೀತಿ, ಚಿನ್ನಿ ಮತ್ತು ತಂಡವರು ಈ ಕೃತ್ಯವೆಸಗಿದ್ದಾರೆ.
ಕೆ ಆರ್ ಪುರಂನಿಂದ ಅಪಹರಣ ಮಾಡಿದಂತ ತೃತೀಯ ಲಿಂಗಿಯರ ಮತ್ತೊಂದು ಗುಂಪು, ಬೊಮ್ಮನಹಳ್ಳಿಯವರೆಗೆ ಕರೆದು ತಂದು ಕೈಮುಗಿದು ಬೇಡಿಕೊಂಡರೂ ದೊಣ್ಣೆ, ಸೌಟ್, ಕೈಗೆ ಸಿಕ್ಕಂತ ವಸ್ತುಗಳು, ಕಾಲಿನಿಂದ ಒದ್ದು ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.