Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಯುವ ಸಮಾಜ ಕ್ಕೆ ಮಾದರಿ”-ಡಾ. ಎಲ್ ಕೆ ಸುವರ್ಣ

Spread the love

ಮಂಜೇಶ್ವರ: ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ 9ನೇ ವಾರ್ಷಿಕೋತ್ಸವವು ಹೊಸಂಗಡಿಯಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ಸರಳವಾದ ಮಾದರಿ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿದ್ದು, ಸಂಸ್ಥೆಯ ಸದಸ್ಯೆಯರಾದ ಆಶಾ ಲೋಕೇಶ್ ಮತ್ತು ಇತರ ಸದಸ್ಯರು ಪ್ರಾರ್ಥನಾ ಹಾಡುಗಳನ್ನು ಹಾಡಿದರು. ಸ್ವಾಗತ ಭಾವನೆಯೊಂದಿಗೆ ಸಂಸ್ಥೆಯ ಉಪಾಧ್ಯಕ್ಷರಾದ ರೂಪೇಶ್ ಜೋಡುಕಲ್ಲು ಅವರು ಕಾರ್ಯಕ್ರಮಕ್ಕೆ ಶುಭಾರಂಭವನ್ನು ಮಾಡಿದರು. ನಂತರ, ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಸಭಾ ವೇದಿಕೆಯಲ್ಲಿ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ. ಎಲ್. ಕೆ. ಸುವರ್ಣ ಅವರು, “ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಯುವ ಜನತೆಗೆ ಮಾದರಿಯಾಗಿ ಹೊರಹೊಮ್ಮಿದೆಯೆಂದು” ಸಂತೋಷ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾದ ಶ್ರೀ ವಿಜಯ ಪಂಡಿತ್, ಶ್ರೀಮತಿ ಅಶ್ವಿನಿ ಯಂ ಯಲ್, ಶ್ರೀ ಸುರೇಶ್ ಪಾಟ್ನಗಾರ್, ಶ್ರೀ ಸಚಿನ್ ಶೆಣೈ , ಮತ್ತು ಬಾಲಕೃಷ್ಣ ಮಾಸ್ಟರ್ ಮೀನಾರು ಮುಂತಾದವರು ಸಂಸ್ಥೆಯ ಪ್ರಗತಿ ಮತ್ತು ಸೇವಾ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ, ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೌರವಾಧ್ಯಕ್ಷರಾದ ಶ್ರೀ ನ್ಯಾ. ನವೀನ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೃಷ್ಣ ಅಟ್ಟೆಗೋಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಸ್ಥೆಯ ಖಜಾಂಚಿಯಾದ ಶ್ರೀ ನಂದ ಹೊಸಂಗಡಿ ಅವರು, ಸಂಘಟನೆಯ ವರದಿ ಹಾಗೂ ಲೆಕ್ಕಪತ್ರವನ್ನು ವಾಚಿಸಿದರು.

ಈ ನಂತರ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು, ವರ್ಕಾಡಿ, ಮಿಂಜ, ಮಂಜೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ 120 ಅರ್ಹ ಬಡ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ನೀಡಲಾದವು.

ಕೊನೆಯಲ್ಲಿ, ಸಂಸ್ಥೆಯ ಸದಸ್ಯೆಯಾದ ಶ್ರೀಮತಿ ಸುಜಾತಾ ಟೀಚರ್ ಕಣ್ವತೀರ್ಥ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಸಮಾರಂಭದ ನಿರೂಪಣೆಯನ್ನು ವಿಖ್ಯಾತ್ ಸುಂಕದಕಟ್ಟೆ ಅವರು ನಡೆಸಿದರು.ಕೊನೆಯಲ್ಲಿ ಸೇರಿದ ಎಲ್ಲರಿಗೂ ಲಘು ಉಪಾಹಾರದೊಂದಿಗೆ
ಸಂಸ್ಥೆಯ ಸದಸ್ಯರೆಲ್ಲರಿಂದ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಅಚ್ಚುಕಟ್ಟಾಗಿ ನಡೆಯಲು ಸಾಧ್ಯವಾಯಿತು. ಮುಂದಿನ ಸೇವಾ ಯೋಜನೆಗಳಿಗೆ ಸಹಾಯ ಸಹಕಾರ ಅಪೇಕ್ಷಿಸಲಾಯಿತು.


Spread the love
Share:

administrator

Leave a Reply

Your email address will not be published. Required fields are marked *