Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮತ್ತೆ 2008ರ ಆರ್ಥಿಕ ಬಿಕ್ಕಟ್ಟಿಗೆ ಭಾರತ ಸಜ್ಜಾಗಿ-ನಿತಿನ್ ಕಾಮತ್

Spread the love

ನವದೆಹಲಿ: ಭಾರತದ ಪ್ರಮುಖ ಉದ್ಯಮಿಗಳು ಮೇಲಿಂದ ಮೇಲೆ ಹಲವು ಎಚ್ಚರಿಕೆ ನೀಡುತ್ತಿದ್ದಾರೆ. ಇದೀಗ ಝೆರೋಧಾ ಸಿಇಒ ನಿತಿನ್ ಕಾಮತ್ ನೀಡಿದ ಎಚ್ಚರಿಕೆ ಹಲವರನ್ನು ಬಡಿದೆಬ್ಬಿಸಿದೆ.ಒಂದಷ್ಟು ಮಂದಿಯಲ್ಲಿ ಆತಂಕ ಸೃಷ್ಟಿಸಿದೆ, ಮುಂದಿನ ದಿನಗಳ ಕುರಿತು ಭೀತಿ ಎದುರಾಗುತ್ತಿದೆ. ಕಾರಣ 2008ರಂತೆ ಎಲ್ಲರೂ ದೂರ ಸರಿಯುತ್ತಾರೆ. 2008ರ ಪರಿಸ್ಥಿತಿ ಮತ್ತೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಅಷ್ಟಕ್ಕೂ ನಿತಿನ್ ಕಾಮತ್ ನೀಡಿದ ಎಚ್ಚರಿಕೆ ಇತ್ತೀಚೆಗೆ ಷೇರು ಮಾರುಕಟ್ಟೆ ಕಂಡ ಕುಸಿತದಿಂದ ಆದ ಪರಿಣಾಮ. ಷೇರು ಮಾರುಕಟ್ಟೆ ಇದೇ ರೀತಿ ರಕ್ತಪಾತವಾದರೆ 2008ರಲ್ಲಿ ಎದುರಾದ ಆರ್ಥಿಕ ಹಿಂಜರಿತ ಎದುರಾಗಲಿದೆ. ಎಲ್ಲರೂ ಷೇರುಮಾರುಕಟ್ಟೆಯಿಂದ ದೂರ ಉಳಿಯುತ್ತಾರೆ. ಇದು ಮತ್ತೊಂದು ಆರ್ಥಿಕ ದುರಂತಕ್ಕೆ ಕಾರಣವಾಗಲಿದೆ ಎಂದು ನಿತಿನ್ ಕಾಮತ್ ಎಚ್ಚರಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾದರೆ, ಹೂಡಿಕೆದಾರರು ಮಾರುಕಟ್ಟೆಯಿಂದ ದೀರ್ಘಕಾಲ ದೂರ ಉಳಿಯಬಹುದು ಎಂದು ಅವರು ಹೇಳಿದ್ದಾರೆ. 2008ರಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ರಿಟೇಲ್ ಹೂಡಿಕೆದಾರರು ಹೇಗೆ ದೂರ ಸರಿದರೋ ಹಾಗೆ ಆಗಬಹುದು.ಝೆರೋಧದ ನಿತಿನ್ ಕಾಮತ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಕೆಲವು ಅಂಕಿಅಂಶಗಳನ್ನು ಹಂಚಿಕೊಂಡು, 2008 ರಿಂದ 2014 ರ ನಡುವೆ ಇಕ್ವಿಟಿ ಓರಿಯೆಂಟೆಡ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ನಿವ್ವಳ ಹರಿವು ತೀವ್ರವಾಗಿ ಕುಸಿದಿದೆ ಎಂದು ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿ ರಿಟೇಲ್ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಖರೀದಿಸುತ್ತಿದ್ದಾರೆ. ಬಾಹ್ಯ ಅಪಾಯಗಳು ಮತ್ತು ಜಾಗತಿಕ ಅಡೆತಡೆಗಳ ನಡುವೆಯೂ ‘ಕುಸಿತದಲ್ಲಿ ಖರೀದಿ’ ಮಾಡಿದ ನಂತರ, ರಿಟೇಲ್ ಹೂಡಿಕೆದಾರರು 2020 ರಿಂದ 2024 ರ ನಡುವೆ ಭಾರತೀಯ ಷೇರು ಮಾರುಕಟ್ಟೆಯ ಏರಿಕೆಗೆ ಬೆನ್ನೆಲುಬಾಗಿದ್ದಾರೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ತೀವ್ರ ಕುಸಿತದಿಂದ ಅವರು ದೀರ್ಘಕಾಲದವರೆಗೆ ದೂರವಿರಬಹುದು. ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *