Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ನೇಹದ ಹೆಸರಿನಲ್ಲಿ ಸ್ನೇಹಿತನ ಹೆಂಡತಿಯ ಮೇಲೆ ಕಣ್ಣು, ಸ್ನೇಹಿತನಿಗೆ ಮಚ್ಚಿನ ರುಚಿ ತೋರಿಸಿದ ಪತಿ..!

Spread the love

ಬೆಂಗಳೂರು : ಹೆಂಡತಿ ಮೇಲೆ ಕಣ್ಣಾಕಿದ್ದ ಸ್ನೇಹಿತನಿಗೆ ಲಾಂಗ್​ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಹಲ್ಲೆಗೊಳಗಾದ ಯುವಕನನ್ನು 30 ವರ್ಷದ ಕಿರಣ್​ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಯುವಕನನ್ನು ಅರ್ಜುನ್​ ಎಂದು ಗುರುತಿಸಲಾಗಿದೆ.

ಕಿರಣ್ ಹಾಗೂ ಅರ್ಜುನ್ ಇಬ್ಬರು ಸ್ನೇಹಿತರೇ, ಆದರೆ ಅರ್ಜುನ್ ಪತ್ನಿ‌ ಮೇಲೆ ಕಿರಣ್​ ಕಣ್ಣಾಕಿದ್ದನು. ಅರ್ಜುನ್​ ಪತ್ನಿಗೆ ಪದೇ ಪದೇ ಮೆಸೇಜ್​, ಕರೆ ಮಾಡುತ್ತಿದ್ದ ಕಿರಣ್​ ಆಕೆಯೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದನು. ಇದನ್ನು ಗಮನಿಸಿದ್ದ ಅರ್ಜುನ್​, ಕಿರಣ್​ ಮೇಲೆ ಕೋಪಗೊಂಡಿದ್ದನು. ಇದೇ ಕಾರಣಕ್ಕೆ ಫೆಬ್ರವರಿ 4ರ ಸಂಜೆ ಗಾಣಿಗರ ಪಾಳ್ಯ ಗೌರಿಶಂಕರ ಬಾರ್ ಗೆ ಕಿರಣ್ ನನ್ನ ಕುಡಿಯಲು ಕರೆದುಕೊಂಡು ಬಂದಿದ್ದ.
ಮನೆಯಿಂದ ಬರ್ತಾ ಒಂದು ಲಾಂಗ್ ಕೂಡ ತಂದಿದ್ದ ಅರ್ಜುನ್, ಕಿರಣ್​ಗೆ ಕಂಠ ಪೂರ್ತಿ ಕುಡಿಸಿ ಲಾಂಗ್​ನಿಂದ ಹಲ್ಲೆ ಮಾಡಿದ್ದಾನೆ. ಕಿರಣ್​ ಕುತ್ತಿಗೆ ಭಾಗಕ್ಕೆ ಅರ್ಜುನ್ ಬಲವಾಗಿ ಹೊಡೆದಿದ್ದು. ಗಂಭೀರವಾಗಿ ಗಾಯಗೊಂಡಿರುವ ಕಿರಣ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ಅರ್ಜುನ್​ನನ್ನು ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದಿದ್ದು. ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿಪಿ ಲೋಕೆಶ್ ಜಗಲಾಸರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ


Spread the love
Share:

administrator

Leave a Reply

Your email address will not be published. Required fields are marked *