Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಸ್ಕಾಂ ನ ನಿರ್ಲಕ್ಷ್ಯಕ್ಕೆ ಅರೆ ಬೆಂದು ಒದ್ದಾಡುತ್ತಿರುವ ಬಾಲಕ

Spread the love

ಬೆಂಗಳೂರು:ಮತ್ತೊಮ್ಮೆ ರಾಜಧಾನಿಯಲ್ಲಿ ಬೆಸ್ಕಾ ನಿರ್ಲಕ್ಷ ಆರೋಪ ಕೇಳಿ ಬಂದಿದ್ದು, ಕರೆಂಟ್​ ಶಾಕ್​​ನಿಂದಾಗಿ 10 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಆರ್ ಪುರಂ 53ನೇ ವಾರ್ಡ್​​​ನಲ್ಲಿ ನಡೆದಿದೆ.

ನಿರ್ಮಾಣ ಹಂತದ ಕಟ್ಟಡದ ಬಳಿ ವಿದ್ಯುತ್ ಪ್ರವಹಿಸಿದ್ದರಿಂದ ಬಾಲಕನ ದೇಹವು ಶೇ.80ರಷ್ಟು ಸುಟ್ಟಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿರ್ಮಾಣ ಹಂತದ ಕಟ್ಟಡದ ಬಳಿ ಆಟವಾಡುತ್ತಿದ್ದ ಬಾಲಕನು ಪೊರಕೆಯನ್ನು ಎಸೆದಾಗ ಈ ವೇಳೆ ಕರೆಂಟ್ ಶಾಕ್ ಹೊಡೆದು ಕುಸಿದುಬಿದ್ದಿದ್ದಾನೆ.

ಮನೆಯಲ್ಲಿದ್ದ ಪೊರಕೆ ಬಿಸಾಡಲು ಹೋಗಿದ್ದ ಬಾಲಕನಿಗೆ ಈ ವೇಳೆ ಮನೆ ಬಳಿ ಇದ್ದ ವಿದ್ಯುತ್​​ ಕಂಬದಿಂದ ವಿದ್ಯುತ್ ಶಾಕ್ ಅವಘಡ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಶಾರ್ಟ್​​​ ಸರ್ಕ್ಯೂಟ್​​ನಿಂದಲೂ ಮನೆಯ ವೈಯರ್​​ಗೂ ಬೆಂಕಿ ತಗುಲಿದೆ. ಗಾಯಾಳು ಬಾಲಕನ ಕುಟುಂಬದವರು ಕಳೆದ ಎರಡು ವರ್ಷದಿಂದ ಇಲ್ಲೇ ನೆಲೆಸಿದ್ದು, ಅವರದ್ದು ನೇಪಾಳ ಮೂಲ ಎಂದು ತಿಳಿದುಬಂದೆ. ಸದ್ಯ ಕೆಆರ್​​​ ಪುರಂ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *