ಕುಂಭಮೇಳದ ಐಐಟಿ ಬಾಬಾ ಬಂಧನ: ಆತ್ಮಹತ್ಯೆ ಬೆದರಿಕೆ, ಹೋಟೆಲ್ನಿಂದ ಗಾಂಜಾ ವಶ

ಜೈಪುರ: ಮಹಾಕುಂಭದ ವೇಳೆ ಭಾರೀ ಸುದ್ದಿಯಾಗಿದ್ದ ಐಐಟಿ ಪದವೀಧರ ‘ಐಐಟಿ ಬಾಬಾ’ ಅಲಿಯಾಸ್ ಅಭಯ್ ಸಿಂಗ್ರನ್ನು (IIT Baba) ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನದ ಜೈಪುರದಲ್ಲಿ ಪೊಲೀಸರು ಐಐಟಿ ಪದವೀಧರ ಬಾಬಾ ಅಭಯ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಐಐಟಿ ಬಾಬಾ ಸಾಮಾಜಿಕ ಮಾಧ್ಯಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಪೊಲೀಸರು ಆತನ ಸ್ಥಳವನ್ನು ಪತ್ತೆಹಚ್ಚಿ ಜೈಪುರದ ರಿದ್ಧಿ-ಸಿದ್ಧಿ ಪ್ರದೇಶದ ಹೋಟೆಲ್ನಲ್ಲಿ ಅರೆಸ್ಟ್ ಮಾಡಿದ್ದಾರೆ.ಬಂಧನದ ವೇಳೆ ಐಐಟಿ ಬಾಬಾ ಬಳಿ ಗಾಂಜಾ ಮತ್ತು ಇತರ ಕೆಲವು ಮಾದಕ ವಸ್ತುಗಳು ಸಹ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಐಟಿಯನ್ ಬಾಬಾ ಎಂದೇ ಜನಪ್ರಿಯರಾಗಿರುವ ಅಭಯ್ ಸಿಂಗ್, ಸಾಮಾಜಿಕ ಮಾಧ್ಯಮದಲ್ಲಿ ಆತ್ಮಹತ್ಯೆ ಬೆದರಿಕೆ ಹಾಕಿದ್ದರು. ಇದಾದ ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿ ಬಂಧಿಸಿದ್ದಾರೆ.ಐಐಟಿ ಬಾಬಾ ಬಂಧಿಸುವ ಮುನ್ನ ಪೊಲೀಸರು ಆತನ ಸ್ಥಳವನ್ನು ಜೈಪುರದ ರಿದ್ಧಿ-ಸಿದ್ಧಿಯಲ್ಲಿರುವ ಹೋಟೆಲ್ನಲ್ಲಿ ಪತ್ತೆಹಚ್ಚಿದರು. ನಂತರ ಶಿಪ್ರಪಥ ಪೊಲೀಸ್ ಠಾಣೆಯ ಸಿಐ ರಾಜೇಂದ್ರ ಗೋದಾರ ತಮ್ಮ ತಂಡದೊಂದಿಗೆ ಹೋಟೆಲ್ಗೆ ತಲುಪಿ ಅಲ್ಲೇ ಐಐಟಿ ಬಾಬಾನನ್ನು ವಶಕ್ಕೆ ಪಡೆದರು.ಹೋಟೆಲ್ ಕೊಠಡಿಯನ್ನು ಶೋಧಿಸಿದಾಗ, ಪೊಲೀಸರಿಗೆ ಗಾಂಜಾ ಸೇರಿದಂತೆ ಕೆಲವು ಮಾದಕ ವಸ್ತುಗಳು ಸಿಕ್ಕವು. ಇದಾದ ನಂತರ ಪೊಲೀಸರು ಐಐಟಿ ಬಾಬಾನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಬಾಬಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಕ್ಕೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.ಅಲ್ಲದೆ, ಐಐಟಿ ಬಾಬಾ ಕೋಣೆಯಲ್ಲಿ ಪತ್ತೆಯಾದ ಮಾದಕ ವಸ್ತುಗಳ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬಾಬಾ ವಿರುದ್ಧ ಇದಕ್ಕೂ ಮೊದಲು ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಐಐಟಿ ಬಾಬಾನಿಗೆ ಬೇಲ್ ಸಿಕ್ಕಿದ್ದು, ಷರತ್ತು ವಿಧಿಸಿ ಬಿಡುಗಡೆಗೊಳಿಸಲಾಗಿದೆ.ಹೋಟೆಲ್ ಕೊಠಡಿಯನ್ನು ಶೋಧಿಸಿದಾಗ, ಪೊಲೀಸರಿಗೆ ಗಾಂಜಾ ಸಿಕ್ಕಿದ ಸಂದರ್ಭದಲ್ಲಿ, ಅಭಯ್ ಸಿಂಗ್ ಅಲಿಯಾಸ್ ಐಐಟಿಯನ್ ಬಾಬಾ ‘ಸ್ವಲ್ಪ ಪ್ರಸಾದ್ (ಗಾಂಜಾ) ಸಿಕ್ಕಿದೆ’ ಎಂದು ಹೇಳಿದ್ದಾರೆ. ಈ ಪ್ರಸಾದದ ಮೇಲೆ ನೀವು ನನ್ನ ಮೇಲೆ ಪ್ರಕರಣ ದಾಖಲಿಸಿದರೆ, ಕುಂಭಮೇಳದಲ್ಲಿ ಅಷ್ಟೊಂದು ಜನರು ಅದನ್ನು ಕುಡಿಯುತ್ತಾರೆ, ಅವರೆಲ್ಲರನ್ನೂ ಬಂಧಿಸಿ ಎಂದು ಪೊಲೀಸರಿಗೆ ಐಐಟಿ ಬಾಬಾ ಹೇಳಿರುವುದಾಗಿ ವರದಿಯಾಗಿದೆ.ಇನ್ನು ಐಐಟಿ ಬಾಬಾ ವಿರುದ್ಧ NDPS ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.