ನನ್ನಲ್ಲಿ ಹಣವೇ ಇಲ್ಲ: ಕಿನ್ನಾರ್ ಅಖಾಡದಿಂದ ಹೊರಬಿದ್ದ ನಟಿ ಮಮತಾ ಕುಲಕರ್ಣಿ!

ಹೊಸದಿಲ್ಲಿ: ಮಹಾ ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿ ಕಿನ್ನಾರ್ ಅಖಾಡ ಸೇರ್ಪಡೆಗೊಂಡು, ವಾರದಲ್ಲೇ ಅಲ್ಲಿಂದ ಉಚ್ಚಾಟಿಸಲ್ಪಟ್ಟ ಬಾಲಿವುಡ್ನ ಮಾಜಿ ನಟಿ ಮಮತಾ ಕುಲಕರ್ಣಿ, ಇದೀಗ ತಮ್ಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿಕೊಂಡಿದ್ದಾರೆ.
ನಟಿ 10 ಕೋಟಿ ರೂ. ಕೊಟ್ಟು, ಮಹಾ ಮಂಡಲೇಶ್ವರ ಪಟ್ಟ ಪಡೆದಿದ್ದರು ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸ್ಪಷ್ಟನೆ ನೀಡಿ, 10 ಕೋಟಿ ರೂ. ಬಿಡಿ, ನನ್ನ ಬಳಿ 1 ಕೋ.ರೂ. ಕೂಡ ಇಲ್ಲ, ಮನೆಯೂ ಇಲ್ಲ, ನನ್ನ ಬಳಿ ಹಣವೇ ಇಲ್ಲ ಎಂದಿದ್ದಾರೆ.