Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪತ್ನಿಯ ಸೌಂದರ್ಯದ ಕಾರಣ ಆತ್ಮಹತ್ಯೆಗೆ ಯತ್ನಿಸಿದ ಪತಿ

Spread the love

ಬರೇಲಿ:ಉತ್ತರ ಪ್ರದೇಶ ಬರೇಲಿಯ ಸಿರೌಲಿ ಎಂಬಲ್ಲಿ 25 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ತುಂಬಾ ಸುಂದರವಾಗಿದ್ದಾಳೆ ಅಂತ ಆತ್ಮಹತ್ಯೆ ಮಾಡಿಕೊಳ್ಳಲು ಎರಡು ಅಂತಸ್ತಿನ ಮನೆಯ ಛಾವಣಿಯ ಮೇಲೆ ಹತ್ತಿದ್ದ. ಗುರುದೇವ್ ಎಂಬಾತನಿಗೆ ಗ್ರಾಮಸ್ಥರು ಮತ್ತು ಆತನ ಸಂಬಂಧಿಕರು ಅಪಹಾಸ್ಯ ಮಾಡಿ ಹುಚ್ಚ ಎಂದು ಹಣೆಪಟ್ಟಿ ಕಟ್ಟಿದ್ರಂತೆ.

ಅದಕ್ಕೆಲ್ಲಾ ಕಾರಣ ಆತನ ಪತ್ನಿ.

ಹೌದು.. ಗುರುದೇವ್​ನ ಪತ್ನಿ ಎಷ್ಟು ಸುಂದರವಾಗಿದ್ದಳು ಎಂದರೆ, ಆಕೆ ‘ಮಾಡೆಲ್ ತರಹ ಇದ್ದಾಳೆ’ ಮತ್ತು ‘ಮಿಸ್ ಯೂನಿವರ್ಸ್ ರೀತಿ ಕಾಣುತ್ತಾಳೆ’ ಎಂದು ಜನರು ಹೇಳ್ತಿದ್ರು. ಹಾಗೆ ಹೇಳಿದವರ ಜೊತೆಗೆಲ್ಲಾ ಗುರುದೇವ್ ಜಗಳ ಮಾಡುತ್ತಿದ್ದ. ಆದ್ದರಿಂದ ಆತನಿಗೆ ಹುಚ್ಚು ಹಿಡಿದಿದೆ ಎಂದು ಜನರು ಹೇಳ್ತಿದ್ರು.

ಗುರುದೇವ್ ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಆದರೆ, ಮದುವೆಯನ್ನ ಸಂಭ್ರಮಿಸುವ ಬದಲು, ಅಪಹಾಸ್ಯವೇ ಹೆಚ್ಚಾದ್ವು. ಅಂತಹ ಸುಂದರ ಮಹಿಳೆಯ ಜೊತೆ ಯಾವಾಗ ಮದುವೆ ಮುರಿದುಬೀಳುತ್ತೋ ಏನೋ ಎಂದು ಜನರ ಅವಮಾನಿಸತೊಡಗಿದರು. ನಿರಂತರ ಅಪಹಾಸ್ಯದಿಂದ ಮಾನಸಿಕವಾಗಿ ನೊಂದ ಗುರುದೇವ್, ಹತ್ತಿರದ ಕಟ್ಟಡದ ಟೆರೇಸ್ ಹತ್ತಿ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ.

ಗುರುದೇವ್‌ನನ್ನು ರಕ್ಷಿಸಿದ್ದು ಹೇಗೆ..?: ಮೇ 25ರ ಸಂಜೆ 4.00 ಗಂಟೆಯ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸಿರೌಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿ ಪ್ರದೇಶವನ್ನು ಸುತ್ತುವರೆದರು. ಗುರುದೇವ್ ಬಿದ್ದರೂ ಏನೂ ಆಗಬಾರದು ಅಂತ ಟಾರ್ಪಾಲಿನ್, ಹಾಸಿಗೆಗಳು ಮತ್ತು ಬಲೆಗಳನ್ನು ಹಾಕಲಾಯಿತು. ಜೊತೆಗೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಗುರುದೇವ್​ನನ್ನು ಕೆಳಗಿಳಿಯುವಂತೆ ಬೇಡಿಕೊಂಡರು.

‘ಸುಮಾರು ಮೂರ್ನಾಲ್ಕು ಗಂಟೆಗಳ ಕಠಿಣ ಪರಿಶ್ರಮದ ನಂತರ, ಸಿರೌಲಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಾಯದಿಂದ ಗುರುದೇವ್​ನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ರು.


Spread the love
Share:

administrator

Leave a Reply

Your email address will not be published. Required fields are marked *