Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹನಿಮೂನ್ ಕೊಲೆ ಪ್ರಕರಣ: ರಾಜಾ ಸಹೋದರಿ ವಿರುದ್ಧವೇ ಎಫ್‌ಐಆರ್ ದಾಖಲು!

Spread the love

ಗುವಾಹಟಿ: ರಾಷ್ಟ್ರವನ್ನೇ ಬೆಚ್ಚಿಬೀಳಿಸಿರುವ ರಾಜಾ ರಘುವಂಶಿ (Raja Raghuvanshi) ಹನಿಮೂನ್ ಕೊಲೆ (Honeymoon Murder) ಪ್ರಕರಣದಲ್ಲಿ ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ. ರಾಜಾ ಅವರ ಸಹೋದರಿ ಶ್ರಸ್ತಿ ರಘುವಂಶಿ (Shrasti Raghuvanshi) ವಿರುದ್ಧ ಗುವಾಹಟಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಆರೋಪ ಸೇರಿದಂತೆ, ಜನರಲ್ಲಿ ಭಯ ಸೃಷ್ಟಿಸುವ ಮತ್ತು ಸಾಮಾಜಿಕ ಅಶಾಂತಿಯನ್ನು ಉಂಟುಮಾಡುವ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.

ಶ್ರಸ್ತಿಯ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಸೋನಂ ರಘುವಂಶಿಯನ್ನು ಕೊಲೆಯ ಮುಖ್ಯ ಆರೋಪಿಯೆಂದು ಭಾವನಾತ್ಮಕವಾಗಿ ಆರೋಪಿಸಿದ್ದು, ವೈರಲ್ ಆಗಿವೆ. ಒಂದು ಪೋಸ್ಟ್‌ನಲ್ಲಿ, ರಾಜಾನನ್ನು ಮೇಘಾಲಯದ ಹನಿಮೂನ್‌ನಲ್ಲಿ ಸೋನಂ “ಬಲಿಕೊಟ್ಟಿದ್ದಾಳೆ” ಎಂದು ಶ್ರಸ್ತಿ ಆರೋಪಿಸಿದ್ದಾರೆ. ಈ ಹೇಳಿಕೆ ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತರುವಂತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. #justiceforraja, #trending ಜತೆಗೆ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹನಿಮೂನ್ ಕೊಲೆ ಪ್ರಕರಣ

ಇಂದೋರ್‌ನ ಸೋನಂ ಮತ್ತು ರಾಜಾ ರಘುವಂಶಿ ಮೇ 11ರಂದು ವಿವಾಹವಾದ ಕೆಲವೇ ದಿನಗಳಲ್ಲಿ ಶಿಲ್ಲಾಂಗ್‌ಗೆ ಹನಿಮೂನ್‌ಗೆ ತೆರಳಿದ್ದರು. ಮೇ 23ರಂದು ನಾಂಗ್ರಿಯಾಟ್ ಗ್ರಾಮದ ಹೋಮ್‌ಸ್ಟೇಯಿಂದ ಚೆಕ್‌ಔಟ್ ಮಾಡಿದ ಬಳಿಕ ಇಬ್ಬರೂ ಕಾಣೆಯಾದರು. 10 ದಿನಗಳ ತೀವ್ರ ಶೋಧದ ಬಳಿಕ, ಜೂನ್ 2ರಂದು ಪೂರ್ವ ಖಾಸಿ ಬೆಟ್ಟಗಳ ವೈಸಾವ್‌ಡಾಂಗ್ ಜಲಪಾತದ ಬಳಿಯ ರಾಜಾ ಅವರ ಶವ ಪತ್ತೆಯಾಗಿತ್ತು. ಸೋನಂ ಉತ್ತರ ಪ್ರದೇಶದ ಠಾಣೆಯಲ್ಲಿ ಶರಣಾಗಿ, ಇತರ ಮೂವರು ಆರೋಪಿಗಳೊಂದಿಗೆ ಬಂಧನಕ್ಕೊಳಗಾದಳು. ಪೊಲೀಸರು ಈ ಕೊಲೆಯನ್ನು ಪೂರ್ವಯೋಜಿತ ಎಂದು ಆರೋಪಿಸಿದ್ದಾರೆ.

ಅಸ್ಸಾಂ ಪೊಲೀಸರು ಶ್ರಸ್ತಿ ಅವರನ್ನು ವಿಚಾರಣೆಗೆ ಒಳಪಡಿಸಲು ನೋಟಿಸ್ ಜಾರಿಗೊಳಿಸಿದ್ದಾರೆ. ರಘುವಂಶಿ ಕುಟುಂಬ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಈ ಪ್ರಕರಣ, ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಅಭಿವ್ಯಕ್ತಿ ಮತ್ತು ಕಾನೂನು ಜವಾಬ್ದಾರಿಯ ಗಡಿಯನ್ನು ತೋರಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *