Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೃದಯವಿದ್ರಾವಕ ಘಟನೆ: ಮದುವೆ ನಂತರದ ಆರತಕ್ಷತೆ ದಿನವೇ ಪತಿಯ ದುರ್ಮರಣ

Spread the love

ಆಂಧ್ರಪ್ರದೇಶ:ಎರಡು ದಿನಗಳ ಹಿಂದೆ ವಿವಾಹವಾದ ನವವರ ಮದುವೆ ಆರತಕ್ಷತೆಗೆ ಸಿದ್ಧನಾಗುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಬಯ್ಯರಂ ಮಂಡಲದ ಕೋಡಿಪುಂಜುಲ ತಾಂಡಾದಲ್ಲಿ ಮಂಗಳವಾರ (ಮೇ.20) ನಡೆದಿದೆ.

ಇಸ್ಲಾವತ್ ನರೇಶ್ (25) ಮೇ 18 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜಾಹ್ನವಿ ಪ್ರಿಯಾ ಎಂಬ ಮಹಿಳೆಯನ್ನು ವಿವಾಹವಾದರು.

ನವವಿವಾಹಿತ ದಂಪತಿಗಳ ವಿವಾಹ ಆರತಕ್ಷತೆ ಮಂಗಳವಾರ ನಡೆಯಬೇಕಿತ್ತು. ಆ ಸಮಯದಲ್ಲಿ ಸ್ವಿಚ್‌ಬೋರ್ಡ್‌ನ ಪ್ಲಗ್‌ಗೆ ಸಡಿಲವಾದ ವಿದ್ಯುತ್ ತಂತಿಗಳನ್ನು ಸೇರಿಸಲು ನರೇಶ್ ಪ್ರಯತ್ನಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಪತಿಯ ಸಾವಿನಿಂದ ವಧು ಪ್ರಿಯಾ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆಘಾತಕಾರಿ ಘಟನೆಯ ನಂತರ ಕೋಡಿಪುಂಜುಲ ತಾಂಡಾದಲ್ಲಿ ದುಃಖದ ವಾತಾವರಣ ಆವರಿಸಿತು. ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (


Spread the love
Share:

administrator

Leave a Reply

Your email address will not be published. Required fields are marked *