ಹೃದಯ ಸ್ಪರ್ಶಿಸಿದ ಮಾನವೀಯತೆ: ಬಡ ಕಾರ್ಮಿಕನಿಗೆ ಮನೆ ಕಟ್ಟಿದ ಗ್ರಾಮಸ್ಥರು

ವಿಟ್ಲ: ವಿಟ್ಲದ ಸಮರ್ಪಣ್ ತಂಡದಿಂದ ಹಲವು ಸಂಘಟನೆ ಮತ್ತು ದಾನಿಗಳ ಸಹಕಾರದಲ್ಲಿ ವಿಟ್ಲಕಸಬಾ ಗ್ರಾಮದ ಕೂಲಿ ಕಾರ್ಮಿಕೆ ವನಿತಾ ಇರಂದೂರು ಅವರಿಗೆ ಮನೆ ನಿರ್ಮಿಸಿ ಕೊಡಲಾಗಿದ್ದು ರವಿವಾರ ರಾಜೇಶ್ ಭಟ್ ಅವರ ಪೌರೋಹಿತ್ಯದಲ್ಲಿ ಗಣಪತಿ ಹವನ ಹಾಗೂ ಹಾಲುಕ್ಕಿಸಿ ಗೃಹಪ್ರವೇಶ ನಡೆಸಲಾಯಿತು.
ಮನೆ ನಿರ್ಮಾಣದಲ್ಲಿ ಸಹಕರಿಸಿದ ಧನಂಜಯ ನೆಕ್ಕರೆಕಾಡು, ರವಿ ಅಂಚನ್, ಕೀರ್ತನ್ ಸಣ್ಣಗುತ್ತು, ತೀರ್ಥೇಶ್, ಮಹೇಶ್, ಮೊದಲಾದವರನ್ನು ವಿಟ್ಲ ಸಮರ್ಪಣ್ ಅಧ್ಯಕ್ಷ ಯಶವಂತ್ ಯನ್. ಹಾಗೂ ಗೌರವಾಧ್ಯಕ್ಷ ಕೃಷ್ಣಯ್ಯ ಕೆ.ವಿಟ್ಲ ಅರಮನೆ ಅವರು ಗೌರವಿಸಿದರು.
ಸಮರ್ಪಣ್ ತಂಡದ ಉಪಾಧ್ಯಕ್ಷ ರವಿವರ್ಮ ವಿಟ್ಲ ಅರಮನೆ, ಯಾದವ ಮಡಿವಾಳಕೋಡಿ, ಕೋಶಾ ಧಿಕಾರಿ ನಿಖೀಲ್ ಸಾಲ್ಯಾನ್, ಕಾರ್ಯದರ್ಶಿ ರೋಹಿತ್ ಕಟ್ಟೆ, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಪವನ್ ಕಟ್ಟೆ, ಗೌರವ ಸಲಹೆಗಾರ ವಿಶ್ವನಾಥ್ ನಾಯ್ತೊಟ್ಟು, ಸಂಚಾಲಕ ಹರೀಶ್ ಕೆ.ವಿಟ್ಲ, ಮಾಮೇಶ್ವರ ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ತ ಮಂಡಳಿ ಅಧ್ಯಕ್ಷ ವೀರಪ್ಪಗೌಡ ರಾಯರಬೆಟ್ಟು , ಬಂಟ್ವಾಳ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಸಿ.ಕೆ.ಗೌಡ, ಶ್ರೀ ಉಮಾಮಹೇಶ್ವರ ಭಜನ ಮಂಡಳಿಯ ಅಧ್ಯಕ್ಷ ಮೋಹನ್ ಇಂದ್ರಪಡು³, ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಮಾಜಿ ಯೋಧ ಬಾಲಕೃಷ್ಣ ಪೊನ್ನೆತ್ತಡಿ, ಕುಶಾಲಪ್ಪ ನಾಯ್ತೊಟ್ಟು, ವಿಟ್ಲ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹರೀಶ್ ಕಟ್ಟೆ, ವಿಶ್ವಸ್ತ ಮಂಡಳಿ ಸದಸ್ಯ ಮೋನಪ್ಪಗೌಡ ರಾಯರಬೆಟ್ಟು, ರವಿ ಅಂಚನ್ ಮಾಡ್ತೇಲು, ಉಮಾಮಹೇಶ್ವರ ಭಜನ ಮಂಡಳಿ ಉಪಾಧ್ಯಕ್ಷ ಶಶಿಧರ ಗೌಡ ಕೈಂತಿಲ, ಕಾರ್ಯದರ್ಶಿ ಸಂಪತ್ ಮಾಮೇಶ್ವರ, ಪಡೀಲ್ ನವ ಚೇತನ ಗೆಳೆಯರ ಬಳಗದ ಅಧ್ಯಕ್ಷ ಚರಣ್ ಪಡೀಲ್, ಮಾಜಿ ಅಧ್ಯಕ್ಷ ಅಶೋಕ್ ಪಡೀಲ್, ತೀರ್ಥೇಶ್ ಇರಂದೂರು, ಮಾಮೇಶ್ವರ ತ್ರಿಶೂಲ್ ಫ್ರೆಂಡ್ಸ್ ಸಂಚಾಲಕ ಪ್ರಶಾಂತ್ ಅಡ್ಡಾಳಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ನವಗ್ರಾಮ, ಶ್ರೀ ಶರಣಂ ಕನ್ಸ್ಟ್ರಕ್ಷನ್ ಇರಂದೂರು ಮಾಲಕ ಮೋಹನ್ಚಂದ್ರ ಇರಂದೂರು, ವಿಟ್ಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಜಲಜಾಕ್ಷಿ ಪೊನ್ನೆತ್ತಡಿ, ಅಂಗನವಾಡಿ ಶಿಕ್ಷಕಿ ಕಲ್ಯಾಣಿ ವೀರಪ್ಪಗೌಡ ರಾಯರಬೆಟ್ಟು, ನವಚೇತನ ಗೆಳೆಯರ ಬಳಗ ಇರಂದೂರು ಪಡೀಲ್, ಇರಂದೂರು ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್, ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಇದರ ಪ್ರಮುಖರು ಉಪಸ್ಥಿತರಿದ್ದರು.
ಸಮರ್ಪಣ್ ಸಂಘಟನೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು ಇದೀಗ ಕಾರ್ಮಿಕರಿಗೆ ಮನೆ ನಿರ್ಮಿಸಿದೆ.
ಯಶವಂತ್ ಎನ್. ಹಾಗೂ ಕೃಷ್ಣಯ್ಯ ಕೆ.ವಿಟ್ಲ ಅರಮನೆ ಅವರನ್ನು ಸ್ಥಳೀಯರು ಸಮ್ಮಾನಿಸಲಾಯಿತು.