Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತೀರ್ಥಹಳ್ಳಿಯಲ್ಲಿ 29 ಲಕ್ಷದ ಗೂಡ್ಸ್ ವಾಹನ ಕಳ್ಳತನ – 24 ಗಂಟೆಯಲ್ಲಿ ಆರೋಪಿಗಳು ಸೆರೆ

Spread the love

ತೀರ್ಥಹಳ್ಳಿ : ಪಟ್ಟಣದ ರಂಜದ ಕಟ್ಟೆಯ ಸಮೀಪ ನಿನ್ನೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಗೂಡ್ಸ್ ವಾಹನವನ್ನು ನಿಲ್ಲಿಸಿ ನಮಾಜಿಗೆ ಎಂದು ತೆರಳಿದ್ದ ಹೊನ್ನಾಳಿ ಮೂಲದ ಗುಜರಿ ವ್ಯಾಪಾರ ಮಾಡುವ ಮಾಲಿಕ ಹಾಗೂ ಡ್ರೈವರ್ ವಾಹನ ನಿಲ್ಲಿಸಿದ ನಂತರ ಇವರು ನಮಾಜಿಗೆ ಹೋಗಿದ್ದನ್ನು ನೋಡಿ ಇವರ ಗೂಡ್ಸ್ ವಾಹನವನ್ನು ತೆಗೆದುಕೊಂಡು ಸ್ವಲ್ಪ ದೂರದವರೆಗೆ ಹೋಗಿ ಅಲ್ಲಿ ಹಣವನ್ನು ತೆಗೆದುಕೊಂಡು ಗೂಡ್ಸ್ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ಪ್ರಕರಣ ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು .

ಕದ್ದವರು ಸಿಕ್ಕಿಬಿದ್ದರು..!

ಈ ಪ್ರಕರಣವನ್ನು ಬೆನ್ನತ್ತಿದ ತೀರ್ಥಹಳ್ಳಿ ಪೊಲೀಸರು ಪ್ರಕರಣ ನಡೆದು 24 ಗಂಟೆ ಒಳಗೆ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಆರೋಪಿಗಳು ಹೊನ್ನಾಳಿ ಮೂಲದವರಾಗದ್ದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ಹತ್ತಿರ ಕಳುವಾಗಿದ್ದ ಸುಮಾರು 29 ಲಕ್ಷ ರೂಗಳನ್ನು ವಶಪಡಿಸಿಕೊಳ್ಳುವ ತಯಾರಿಯಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪತ್ರಿಕೆಯ ವರದಿ ನಿಜವಾಯಿತು

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಿಕೆ ಸುದ್ದಿ ಮಾಡುವಾಗ ಈ ಪ್ರಕರಣದಲ್ಲಿ ಡ್ರೈವರ್ ಮತ್ತು ಮಾಲೀಕರು ಇಬ್ಬರು ಇದ್ದರು ಕದ್ದವರು ಯಾರು..?! ಮಾಲಿಕ ಕಳ್ಳತನ ಮಾಡುವುದಿಲ್ಲ … ಹಾಗಾದರೆ ಡ್ರೈವರ್ ಇದರಲ್ಲಿ ಪಾಲುದಾರನ..?! ಈತನ ಕಡೆಯವರು ಇದರಲ್ಲಿ ಇದ್ದಾರಾ ಎನ್ನುವ ಅನುಮಾನ ಪತ್ರಿಕೆ ವ್ಯಕ್ತಪಡಿಸಿದ್ದು…. ಅದು ಈಗ ನಿಜವಾಗಿದ್ದು ಡ್ರೈವರ್ ಹಾಗೂ ಇನ್ನಿಬ್ಬರು ಸೇರಿಕೊಂಡು ಈ ಹಣವನ್ನು ದೋಚಲು ಹೊನ್ನಾಳಿಯಲ್ಲಿ ಸ್ಕೆಚ್ ರೂಪಿಸಿದ್ದಾರೆ ಆದರೆ ಅದನ್ನು ಕಾರ್ಯರೂಪಕ್ಕೆ ತರಲು ತೀರ್ಥಹಳ್ಳಿಯನ್ನು ಬಳಸಿಕೊಂಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಪೊಲೀಸರ ಸಮಗ್ರ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದೆ.


Spread the love
Share:

administrator

Leave a Reply

Your email address will not be published. Required fields are marked *