ತಿರುಪತಿ ಭಕ್ತರಿಗೆ ಸಿಹಿ ಸುದ್ದಿ: ತಿರುಮಲ ಲಡ್ಡು ವಿತರಣೆಗೆ UPI ಪಾವತಿ ಸೌಲಭ್ಯ, ಸರತಿ ಸಾಲು ತಪ್ಪಿಸಲು ಹೊಸ ಮಳಿಗೆಗಳು!

ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯಕ್ಕೆ (tirumala) ತೆರಳುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಟಿಟಿಡಿ ಇತ್ತೀಚೆಗೆ ತಿರುಮಲದಲ್ಲಿ ಲಡ್ಡು ಮಾರಾಟ ಮಳಿಗೆಗಳನ್ನು ಪರಿಚಯಿಸಿದ್ದು, ಭಕ್ತರು ಯುಪಿಐ ಮೂಲಕ ಹೆಚ್ಚುವರಿ ಲಡ್ಡು ಪಡೆಯಲು ಅನುಕೂಲ ಮಾಡಲಾಗಿದೆ.
ಭಕ್ತರು ಲಡ್ಡುಗಾಗಿ ಉದ್ದವಾದ ಸರತಿ ಸಾಲಿನಲ್ಲಿ ದೀರ್ಘ ಹೊತ್ತು ಕಾಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಭಕ್ತರು ಇಂಟರ್ಫೇಸ್ ಮೂಲಕ ಮಾರಾಟ ಮಳಿಗೆಗಳಲ್ಲಿ ತ್ವರಿತವಾಗಿ ಲಡ್ಡು ಸಂಗ್ರಹಿಸಬಹುದು. ಯುಪಿಐ ಪಾವತಿ ಆಯ್ಕೆಗಳ ಲಭ್ಯತೆಯಿಂದ ತಡೆರಹಿತ, ನಗದು ರಹಿತ ವಹಿವಾಟನ್ನು ಖಾತ್ರಿಪಡಿಸಲಾಗಿದೆ.

ಭಕ್ತರು ಲಡ್ಡು ವಿತರಣಾ ಕೌಂಟರ್ಗಳ ಬಳಿ ಸ್ಥಾಪಿಸಲಾದ ಮಳಿಗೆಗಳನ್ನು ಸಂಪರ್ಕಿಸಿದಾಗ ಎರಡು ಆಯ್ಕೆಗಳಿರುತ್ತವೆ. ಒಂದು ದರ್ಶನದ ಟಿಕೆಟ್ ಹೊಂದಿರುವವರಿಗೆ ಇದ್ದರೆ, ಮತ್ತೊಂದು ದರ್ಶನದ ಟಿಕೆಟ್ ಇಲ್ಲದವರಿಗೆ ಇರುತ್ತದೆ. ಯಾತ್ರಿಕರು ತಲಾ ಎರಡು ಲಡ್ಡುಗಳನ್ನು ಖರೀದಿಸಬಹುದು. ದರ್ಶನದ ಟಿಕೆಟ್ ಇಲ್ಲದವರಿಗೆ ಆಧಾರ್ ಕಾರ್ಡ್ ಆಧಾರದ ಮೇಲೆ ಲಡ್ಡುಗಳನ್ನು ಮಾರಾಟ ಮಾಡಲಾಗುತ್ತದೆ. ಯುಪಿಐ ಮೂಲಕ ಹಣ ಪಾವತಿಸಬೇಕಾಗುತ್ತದೆ.
ಈ ಹೊಸ ನಿಯಮದ ಜಾರಿ ಮಾಡಿರುವುದರಿಂದ ತಿಮ್ಮಪ್ಪನ ಭಕ್ತರಿಗೆ ಅಪಾರ ಸಂತಸ ಉಂಟಾಗಿದ್ದು, ಕಡಿಮೆ ಅವಧಿಯಲ್ಲೇ ಲಡ್ಡು ಖರೀದಿ ಮಾಡಬಹುದಾಗಿದೆ.