Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಕಾನೇರ್ ಸಿಲಿಂಡರ್ ಸ್ಫೋಟದ ಅವಶೇಷಗಳಲ್ಲಿ ಕೋಟಿ ಮೌಲ್ಯದ ಚಿನ್ನ ಪತ್ತೆ

Spread the love

ಜೈಪುರ: ಮನೆಗಳಲ್ಲಿ ಜನರ ನಿರ್ಲಕ್ಷ್ಯದಿಂದ ಸಿಲಿಂಡರ್ ಸ್ಫೋಟ ಸಂಭವಿಸಿ, ಸಾವು-ನೋವುಗಳು ಸಂಭವಿಸುತ್ತವೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಇಂತಹ ಸ್ಫೋಟದ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ರಾಜಸ್ಥಾನದ ಬಿಕಾನೇರ್ ನಗರದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ ನಂತರ ಒಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಮೇ 7ರಂದು ಮದನ್ ಮಾರ್ಕೆಟ್‌ನಲ್ಲಿ ಸಂಭವಿಸಿದ ಈ ಭೀಕರ ದುರಂತದ ನಂತರ, ಅವಶೇಷಗಳನ್ನು ತೆರವುಗೊಳಿಸಿದಾಗ, ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಈ ಬೆಲೆಬಾಳುವ ವಸ್ತುಗಳನ್ನು ಈಗ ಪೊಲೀಸ್ ಠಾಣೆಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ. 

ಈ ಘಟನೆಯಲ್ಲಿ ಈವರೆಗೆ 11 ಜನರು ಸಾವನ್ನಪ್ಪಿದ್ದಾರೆ ಮತ್ತು ಕೋಟಿಗಟ್ಟಲೆ ರೂಪಾಯಿ ನಷ್ಟ ಉಂಟಾಗಿದೆ. ಅನೇಕ ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿವೆ. ಅನೇಕ ಮನೆಗಳು ನೆಲಸಮವಾಗಿವೆ. ಎರಡು ಸಿಲಿಂಡರ್‌ಗಳು ಸ್ಫೋಟಗೊಂಡ ನಂತರ ಈ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಟ್ಟಡ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಅವಶೇಷಗಳಲ್ಲಿ ಚಿನ್ನದ ತಿಜೋರಿಗಳು 
ಬಿಕಾನೇರ್ ನಗರ ಪೊಲೀಸರ ಪ್ರಕಾರ, ಅವಶೇಷಗಳಿಂದ ಮೂರು ತಿಜೋರಿಗಳು ಮತ್ತು ಹಲವಾರು ಚೀಲಗಳು, ಗುಲ್ಲಕ್‌ಗಳು ಮತ್ತು ಇತರ ಪೆಟ್ಟಿಗೆಗಳನ್ನು ಹೊರತೆಗೆಯಲಾಗಿದೆ. ತಿಜೋರಿಗಳ ಮಾಲೀಕರನ್ನು ಗುರುತಿಸಲಾಗಿದ್ದು, ಅವರಿಗೆ ಔಪಚಾರಿಕ ತನಿಖೆ ಮತ್ತು ಒಪ್ಪಿಗೆಯ ನಂತರ ಪೊಲೀಸರು ಹಿಂತಿರುಗಿಸಿದ್ದಾರೆ. ಆದರೆ ಉಳಿದ ವಸ್ತುಗಳ ಬಗ್ಗೆ ಇನ್ನೂ ಗೊಂದಲವಿದೆ.

ಕೋಟಿ ಬೆಲೆಬಾಳುವ ಚಿನ್ನ
ಠಾಣಾಧಿಕಾರಿ ಜಸ್ವೀರ್ ಸಿಂಗ್ ಅವರ ಪ್ರಕಾರ, ಠಾಣೆಯಲ್ಲಿ ಇರುವ ಚಿನ್ನದ ಅಂದಾಜು ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿಗಳು, ಮತ್ತು ಅವಶೇಷಗಳಲ್ಲಿ ಇನ್ನೂ 15 ರಿಂದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಇರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಎಚ್ಚರಿಕೆಯಿಂದ ಎಲ್ಲಾ ಹಕ್ಕುದಾರರನ್ನು ಠಾಣೆಗೆ ಕರೆಸಿದ್ದಾರೆ. ಯಾವುದೇ ವಿವಾದ ಉಂಟಾಗದಂತೆ ಫೋಟೋ ಮತ್ತು ಸಾಕ್ಷಿಗಳ ಆಧಾರದ ಮೇಲೆ ಮಾತ್ರ ವಸ್ತುಗಳನ್ನು ಹಿಂತಿರುಗಿಸಲಾಗುತ್ತದೆ.

11 ಜನರ ಸಾವು ಮತ್ತು ಅನೇಕ ಅಂಗಡಿಗಳು ನಾಶ
ಈ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಅಂಗಡಿಗಳು ಸಂಪೂರ್ಣವಾಗಿ ನಾಶವಾಗಿವೆ. ಈಗ ಅವಶೇಷಗಳಿಂದ ಹೊರತೆಗೆದ ಬೆಲೆಬಾಳುವ ವಸ್ತುಗಳ ಬಗ್ಗೆ ಅಂಗಡಿಯವರ ಭರವಸೆ ಪೊಲೀಸ್ ತನಿಖೆಯ ಮೇಲೆ ನಿಂತಿದೆ.

ಚಿಂತಾಮಣಿಯಲ್ಲಿ ಸಿಲಿಂಡರ್ ಸ್ಫೋಟ
ಚಿಂತಾಮಣಿ ನಗರ ಹೊರವಲಯದ ಕರಿಯಪಲ್ಲಿಯ ವೆಂಕಟೇಶ್ವರ ಶಾಲೆಯ ಬಳಿ ಮನೆಯೊಂದರಲ್ಲಿ ಭಾನುವಾರ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಮೂವರ ಮಕ್ಕಳು ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಲಕ್ಷ್ಮೀದೇವಿ (32) ವರ್ಷ, ಹರ್ಷವಧನ್ (14), ಸಂಜಯ್ (13) ಹರಿಪ್ರಿಯಾ (11) ರವರೆಂದು ಗುರ್ತಿಸಲಾಗಿದೆ. ಲಕ್ಷ್ಮೀದೇವಿ ಮತ್ತು ಹರ್ಷವರ್ಧನ್‌ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಿಲಿಂಡರ್ ಸ್ಫೋಟಕ್ಕೆ ಮನೆಯ ಸಾಮಗ್ರಿಗಳು ಚೆಲ್ಲಾಪಲ್ಲಿಯಾಗಿದ್ದು, ಮನೆಯ ಚಾವಣಿ ಕಿತ್ತುಹೋಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಲಿಂಡರ್ ಗ್ಯಾಸ್ ಪೈಪ್ ಸೋರಿಕೆ
ಸಿಲಿಂಡರ್ ಗ್ಯಾಸ್ ಪೈಪ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಬಾರಿ ಅನಾಹುತ ತಪ್ಪಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಣನಕುಂಟೆ ಪೋಲಿಸ್ ಠಾಣಾ ವ್ಯಾಪ್ತಿಯ

ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗೆರೆಯ ರುಚಿ ಕೂಟ್ ಹೋಟೆಲ್‌ನಲ್ಲಿ ಕಾಫಿ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬಾಗಿಲುಗಳೆಲ್ಲಾ ಪೀಸ್ ಪೀಸ್ ಆಗಿವೆ. ಜೊತೆಗೆ ಸ್ಫೋಟದ ವೇಳೆ ಹೋಟೆಲ್ ಬಳಿಯ ಪರಿಕರಗಳು ಕೂಡ ಜಖಂ ಆಗಿವೆ. ಸ್ಫೋಟದ ತೀವ್ರತೆಗೆ ಹೋಟೆಲ್ ಮುಂಭಾಗ ವಸ್ತುಗಳು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೋಟೆಲ್ ಮಾಲೀಕರ ಬೇಜವಾಬ್ದಾರಿತನಿಂದ ಬೆಂಕಿ ಅನಾಹುತ ಸಂಭವಿಸಿದ್ದು, ಹೋಟೆಲ್ ಮುಂದೆ 2 ಪೆಟ್ರೋಲ್ ಬಂಕ್, ಪಕ್ಕದಲ್ಲಿ ಚಿತ್ರಮಂದಿರವಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಕೋಣನ ಕುಂಟೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿ‌ ಅನಾಹುತವನ್ನು ತಪ್ಪಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *