Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು-ಬೆಂಗಳೂರು ರೈಲಿನಲ್ಲಿ 70ರ ವೃದ್ಧೆಯ ಚಿನ್ನಾಭರಣ, ನಗದು ಕಳವು!

Spread the love

ಮಂಗಳೂರು : ಉಡುಪಿಯಿಂದ ಬೆಂಗಳೂರಿಗೆ ರೈಲಿನಲ್ಲಿ (ನಂ. 16586) ಪ್ರಯಾಣಿಸುತ್ತಿದ್ದ 70ರ ವೃದ್ಧೆಯ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಘಟನೆ ಮೇ 30ರಂದು ಸಂಭವಿಸಿದೆ.

ವೃದ್ಧೆ ಸಹಿತ ಐವರು ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ವೃದ್ಧೆ ತಮ್ಮ ತಲೆಯ ಪಕ್ಕದಲ್ಲೇ ಚಿನ್ನಾಭರಣ, ನಗದು ಇದ್ದ ಬ್ಯಾಗ್‌ ಇಟ್ಟುಕೊಂಡು ಮಲಗಿದ್ದರು.

ಬೆಳಗ್ಗೆ 5 ಗಂಟೆಯ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ.
ಸರ, ಉಂಗುರ ಸಹಿತ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ರೂ. ನಗದು ಕಳವಾಗಿವೆ ಎಂದು ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *