Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಂಗಾ ಮಾತೆ ಪಾದ ತೊಳೆಯಲು ಬಂದಿದ್ದಾಳೆ: ಪ್ರವಾಹ ಪೀಡಿತರಿಗೆ ಸಚಿವರ ವಿವಾದಾತ್ಮಕ ಹೇಳಿಕೆ

Spread the love

ಲಕ್ನೋ : ರಾಜ್ಯದ ಕಾನ್ಪುರ ದೇಹತ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಉತ್ತರ ಪ್ರದೇಶದ ಸಚಿವರೊಬ್ಬರು, ಗಂಗಾ ಮಾತೆ ಅವರ ಪಾದಗಳನ್ನ ತೊಳೆಯಲು ಬಂದಿದ್ದಾಳೆ ಮತ್ತು ಅವರ ‘ದರ್ಶನ’ದ ಮೂಲಕ ಅವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಹೇಳಿದ್ದಾರೆ.

ತಾಯಿ ಗಂಗಾ ತನ್ನ ಪುತ್ರರ ಪಾದಗಳನ್ನ ತೊಳೆಯಲು ಬರುತ್ತಾಳೆ. ಕೇವಲ ತನ್ನ ‘ದರ್ಶನ’ದಿಂದ ಮಕ್ಕಳು ಸ್ವರ್ಗಕ್ಕೆ ಹೋಗುತ್ತಾರೆ. ವಿರೋಧ ಪಕ್ಷಗಳು ನಿಮಗೆ ತಪ್ಪು ಮಾಹಿತಿ ನೀಡುತ್ತವೆ” ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಅವರು ಜಿಲ್ಲೆಯ ಭೋಗ್ನಿಪುರ ಪ್ರದೇಶದ ಪ್ರವಾಹ ಪೀಡಿತರಿಗೆ ಹೇಳುತ್ತಿರುವ ವಿಡಿಯೋ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪ್ರವಾಹ ಪೀಡಿತರು ತಮ್ಮ ಮನೆಗಳನ್ನ ಕಳೆದುಕೊಂಡು ವಾಸಿಸಲು ಸ್ಥಳವಿಲ್ಲ ಎಂದು ದೂರಿದಾಗ ಸಚಿವರ ಈ ಹೇಳಿಕೆ ಹೊರಬಿತ್ತು.
“ಇಡೀ ಪ್ರದೇಶವೇ ಮುಳುಗಿದೆ… ನಮ್ಮ ಮನೆಗಳು ಕುಸಿದಿವೆ… ಬೇರೆಡೆ ಹೋಗಲು ನಮಗೆ ಸ್ಥಳವಿಲ್ಲ” ಎಂದು ಸಂತ್ರಸ್ತರು ಸಚಿವರಿಗೆ ಹೇಳಿದಾಗ, ಸ್ವಲ್ಪ ಪರಿಹಾರದ ನಿರೀಕ್ಷೆಯಲ್ಲಿದ್ದರು ಆದರೆ ಅವರಿಗೆ ವಿಚಿತ್ರ ಪ್ರತಿಕ್ರಿಯೆ ಸಿಕ್ಕಿತು.

ಸಚಿವರ ಹೇಳಿಕೆಯಿಂದ ಸಂತ್ರಸ್ತರು ಆಶ್ಚರ್ಯಚಕಿತರಾಗಿದ್ದು, ನಂತರ ಸಚಿವರು ತಾವು ಭೇಟಿ ನೀಡುತ್ತಿರುವ ಹಳ್ಳಿಗಳು ಗಂಗಾ ಅಲ್ಲ, ಯಮುನಾ ನದಿಯ ದಡದ ಬಳಿ ಇವೆ ಎಂದು ತಿಳಿದಿರಲಿಲ್ಲ ಎಂದು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *