ಗಾಂಜಾ ಚಾಕಲೇಟ್ ಮಾರಾಟ:ಉತ್ತರ ಪ್ರದೇಶದ ಆರೋಪಿ ಸೆರೆ

ಮಂಗಳೂರು: ನಗರದ ಪಂಪ್ವೆಲ್ ಬಳಿಯ ಗೂಡಂಗಡಿಯೊಂದರಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ
ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದೆ.
ಪಂಪ್ವೆಲ್ ಬಳಿಯ ಪಾನ್ ಅಂಗಡಿಯಲ್ಲಿ ಗಾಂಜಾ ಎಲೆಗಳ ವಾಸನೆಯುಳ್ಳ ಚಾಕ್ಲೇಟ್ಗಳನ್ನು ಮಾರಾಟ ಮಾಡುತ್ತಿದ್ದಾನೆಂಬ ಆರೋಪ ಕೇಳಿ ಬಂದ ಬಳಿಕ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದರು. ಈ ಸಂದರ್ಭ ಆರೋಪಿ ಸುಜಿತ್ ಮಾದಕ ದ್ರವ್ಯ ಮಿಶ್ರಿತ ಚಾಕಲೇಟ್ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಗೂಡಂಗಡಿಯಲ್ಲಿ ದಾಸ್ತಾನಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಪ್ರಕಾರ ಕೇಸು ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಬಕಾರಿ ಇಲಾಖೆಯ ಮಂಗಳೂರು ಉತ್ತರ ವಿಭಾಗದ ಉಪಾಧೀಕ್ಷಕ ಗಾಯತ್ರಿ ಸಿ.ಹೆಚ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಉಪವಿಭಾಗದ ನಿರೀಕ್ಷಕಿ ಸುನೀತಾ, ಉಪ ನಿರೀಕ್ಷಕ ರಾದ ಸುಧೀರ್ ಕುಮಾರ್, ಹರೀಶ್, ಹೆಚ್ಸಿ ಸಂಧ್ಯಾ ಹಾಗೂ ಚಾಲಕ ಹರೀಶ, ಪಿಸಿ ಮಾರುತಿ ಡಿ.ಜೆ. ಪಾಲ್ಗೊಂಡಿದ್ದರು.