Gadag: ಕೇವಲ 10 ಸಾವಿರ ರೂಪಾಯಿ ಬಡ್ಡಿ ಹಣ ವಾಪಸ್ ಕೊಡದಿದ್ದಕ್ಕೆ ಮನೆಯಿಂದ ಹೊರಹಾಕಿ ಕಿರುಕುಳ

ಗದಗ: ವೃದ್ಧೆಯನ್ನು ಮನೆಯಿಂದ ಹೊರಹಾಕಿದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಫೆ.4ರ ಮಂಗಳವಾರ ನಡೆದಿದೆ.
ಉಷಾದೇವಿ ಗುರುದೇವಯ್ಯ ಶಾಂತಸ್ವಾಮಿಮಠ (65) ಕಿರುಕುಳಕ್ಕೆ ಒಳಗಾದವರು.
ಬಡ್ಡಿಕೋರ ಮೌಲಾಸಾಬ್ ಕೇವಲ 10 ಸಾವಿರ ರೂಪಾಯಿ ಬಡ್ಡಿ ಹಣ ವಾಪಸ್ ಕೊಡದಿದ್ದಕ್ಕೆ ಮನೆಗೆ ಬೀಗ ಹಾಕಿ ಕಿರುಕುಳ ನೀಡಿದ್ದಾರೆ
ವೃದ್ಧೆಯನ್ನು ಮನೆಯಿಂದ ಹೊರ ಹಾಕಿದ ಬಡ್ಡಿ ದಂಧೆಕೋರ ಮೌಲಾಸಾಬ್.
ಉಷಾದೇವಿ ಗುರುದೇವಯ್ಯ ಶಾಂತಸ್ವಾಮಿಮಠ ಅವರ ರೋಣ ಪಟ್ಟಣದ ಶಾಂಭವರ ಚಾಳನಲ್ಲಿರುವ ಮನೆಗೆ ಬೀಗ ಹಾಕಿ ಕಿರುಕುಳ ನೀಡಿದ್ದು, ವೃದ್ಧೆ ಮೌಲಾಸಾಬ್ ಎಂಬವರಿಂದ 10 ಸಾವಿರ ರೂ. ಸಾಲ ಪಡೆದಿದ್ದರು.
ಸಹೋದರನ ಚಿಕಿತ್ಸೆಗಾಗಿ ಉಷಾದೇವಿ ಸಾಲ ಪಡೆದಿದ್ದು, ಕಾಲಾವಕಾಶ ಕೊಡಿ ಅಂದ್ರು ಕೇಳದೆ ಬಡ್ಡಿ ದಂಧೆಕೋರ ಮೌಲಾಸಾಬ್, ವೃದ್ಧೆಯನ್ನು ಹೊರಹಾಕಿ ಮನೆಗೆ ಬೀಗ ಹಾಕಿ ಟಾರ್ಚರ್ ನೀಡಿದ್ದಾರೆ.
ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವೃದ್ಧೆ ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ.