ಕಸದ ಬುಟ್ಟಿಯಿಂದ ಕಲ್ಯಾಣದ ಕಚೇರಿಗೆ: ಮಾಲಾ ಪಾಪಲ್ಕರ್ ನ ಜಯದ ಹೆಜ್ಜೆ

ಮುಂಬೈ: 25 ವರ್ಷಗಳ ಹಿಂದೆ ಜಲಗಾಂವ್ ರೈಲ್ವೆ ನಿಲ್ದಾಣದ ಕಸದ ಬುಟ್ಟಿಯಲ್ಲಿ ಪತ್ತೆಯಾದ ದೃಷ್ಟಿ ವಿಕಲಚೇತನ ಮಹಿಳೆ ಮಾಲಾ ಪಾಪಲ್ಕರ್ ಈಗ ಎಂಪಿಎಸ್ಸಿ (ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ) ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ನಾಗುರ ಕಲೆಕ್ಟರೇಟ್ನಲ್ಲಿ ಕಂದಾಯ ಸಹಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿದ್ದಾರೆ.
ಈ ಮೂಲಕ ತಾನು ಅನಾಥ, ಅಂಧೆಯಾದರೂ ಏನನ್ನೂ ಸಾಧಿಸುವುದು ಕಷ್ಟವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಹೌದು, ಕಳೆದ ವಾರ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ ಸಂಯೋಜಿತ ಗ್ರೂಪ್ ಸಿ ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದ್ದು, ಪಟ್ಟಿಯಲ್ಲಿರುವ ಅನೇಕ ಹೆಸರುಗಳಲ್ಲಿ ಅಮರಾವತಿಯ ಮಾಲಾ ಪಾಪಲ್ಕರ್ ಹೆಸರು ಕೂಡಾ ಸೇರಿತ್ತು. ಅವರು 2023 ರಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶವನ್ನು 22 ತಿಂಗಳುಗಳ ನಂತರ ಘೋಷಸಲಾಗಿದೆ. ನೇಮಕಾತಿ ಪತ್ರವನ್ನು ಪಡೆದ ಬೆನ್ನಲ್ಲೇ ಪಾಪಲ್ಕರ್ ನಾಗ್ಪುರದ ಕಲೆಕ್ಟರ್ ಕಚೇರಿಯಲ್ಲಿ ಕಂದಾಯ ಸಹಾಯಕಿಯಾಗಿ ಸೇರಿಕೊಂಡಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಆಕೆ, ನಾನು ಪದ್ಮಶ್ರೀ ಶಂಕರ್ ಬಾಬಾ ಪಾಪಲ್ಕರ್ಗೆ ಬಂದಾಗ ನಾನು ಮಗುವಾಗಿದ್ದೆ. ನನ್ನ ಹೆತ್ತವರು ಯಾರು, ಎಲ್ಲಿದ್ದಾರೆಂದು ನನಗೆ ತಿಳಿದಿಲ್ಲ. ಶಂಕರ್ ಬಾಬಾ ನನಗೆ ತಮ್ಮ ಹೆಸರನ್ನು ನೀಡಿದರು ಮತ್ತು ನನ್ನ ಶಿಕ್ಷಣದಲ್ಲಿ ಸಹಾಯ ಮಾಡಿದರು. ನಾನು ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆ ಎಂದು ನನಗೆ ತಿಳಿದಿರಲಿಲ್ಲ. ಈ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ ನಾನು ತುಂಬಾ ಸಂತೋಷಪಟ್ಟೆ. ನಾನು ಪ್ರತಿದಿನ 6-7 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ ಎಂದು ಮಾಲಾ ಪಾಪಲ್ಕರ್ ತಿಳಿಸಿದ್ದಾಳೆ.