ನಮ್ಮ ಮೆಟ್ರೋದಲ್ಲಿ ಮೊದಲ ಬಾರಿ ಅಂಗಾಂಗ ಸಾಗಾಟ: ಟ್ರಾಫಿಕ್ ಜಾಮ್ ತಪ್ಪಿಸಿ ಯಕೃತ್ ರವಾನೆ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಅಂಗಾಂಗ ಸಾಗಣೆ ಮಾಡಲಾಗಿದೆ. ಶುಕ್ರವಾರ ರಾತ್ರಿ ತುರ್ತು ಕಸಿಗಾಗಿ ಆಸ್ಪತ್ರೆಗೆ ಯಕೃತ್ ಸಾಗಾಟ ಮಾಡಲಾಗಿದೆ.

ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ಮೆಟ್ರೋ ದಲ್ಲಿ ಯಕೃತ್ ಸಾಗಿಸಲಾಗಿದೆ. ವೈಟ್ ಫೀಲ್ಡ್ ನಿಲ್ದಾಣದಿಂದ ಆರ್ಆರ್ ನಗರಕ್ಕೆ ಸಾಗಾಟ ಮಾಡಲಾಗಿದೆ.ಆರ್ಆರ್ ನಗರ ಮೆಟ್ರೋ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಸ್ಪರ್ಶ ಆಸ್ಪತ್ರೆಗೆ ಯಕೃತ್ನ್ನು ಕೊಂಡೊಯ್ಯಲಾಗಿದೆ.