ಪಾಕ್ ಪ್ರಧಾನಿ ಶೆಹಬಾಜ್ ಹಾಗೂ ಸೇನಾ ಮುಖ್ಯಸ್ಥ ಮುನೀರ್ ನಿವಾಸ ಸಮೀಪ ಸ್ಫೋಟ?

ಇಸ್ಲಾಮಾಬಾದ್: ಪಾಕಿಸ್ತಾನವು ಮುಟ್ಟಿ ನೋಡಿಕೊಳ್ಳುವಂತಾ ಪಾಠವನ್ನು ಭಾರತ ಕಲಿಸುತ್ತಿದೆ. ಇಸ್ಲಾಮಾಬಾದ್ನಲ್ಲಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನಿವಾಸಗಳ ಬಳಿ ಸ್ಫೋಟಗಳು ಸಂಭವಿಸಿರುವ ಕುರಿತು ವರದಿಯಾಗಿದೆ. ಪಾಕಿಸ್ತಾನದ ಲಾಹೋರ್ನಲ್ಲಿ, ವಿಶೇಷವಾಗಿ ವಾಲ್ಟನ್ ವಿಮಾನ ನಿಲ್ದಾಣ ಮತ್ತು ನಗರದ ಕಂಟೋನ್ಮೆಂಟ್ ಪ್ರದೇಶದ ಬಳಿ ಬಹು ಸ್ಫೋಟಗಳು ಸಂಭವಿಸಿರುವ ವರದಿಗಳಾಗಿವೆ. ಈ ಕುರಿತು ಜೀ ನ್ಯೂಸ್ ವರದಿ ಮಾಡಿದೆಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಂತರ ಹೆಚ್ಚಿದ ಉದ್ವಿಗ್ನತೆಯ ನಡುವೆ ಈ ಸ್ಫೋಟಗಳು ಸಂಭವಿಸಿವೆ. ಏತನ್ಮಧ್ಯೆ, ಶೆಹಬಾಜ್ ಷರೀಫ್ ಬಂಕರ್ನಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪಾಕಿಸ್ತಾನ ಸರ್ಕಾರ ಸ್ಫೋಟಗಳ ಮೂಲವನ್ನು ದೃಢಪಡಿಸಿಲ್ಲ. ಆದಾಗ್ಯೂ, ಭಾರತದ ಇತ್ತೀಚಿನ ವೈಮಾನಿಕ ಎಲ್ಒಸಿಯಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ. ಭಾರತ ಲಾಹೋರ್ನಲ್ಲಿ ಕ್ಷಿಪಣಿಯನ್ನು ಹಾರಿಸಿದೆ. ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ನಾಶವಾಗಿದೆ. ಪೇಶಾವರದಲ್ಲಿ ಸ್ಫೋಟ ಸಂಭವಿಸಿದೆ. ಪಾಕಿಸ್ತಾನಿ ಸೇನಾ ಶಿಬಿರಗಳನ್ನು ನಾಶಪಡಿಸಲಾಗುತ್ತಿದೆ. ಪಾಕಿಸ್ತಾನದ ಜೆಟ್ಗಳು ನಾಶವಾಗಿವೆ. ಶೆಹಬಾಜ್ ಷರೀಫ್ ಅವರ ಮನೆ ಹೆಚ್ಚಿನ ಭದ್ರತಾ ವಲಯದಲ್ಲಿದೆ.
ಪ್ರಧಾನಿಯವರ ಮನೆಯ ಬಳಿ ನಡೆದ ದಾಳಿಯೆಂದರೆ ಇಡೀ ಪಾಕಿಸ್ತಾನದಲ್ಲಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಸಂಜೆ ಪಾಕಿಸ್ತಾನ ಏಕಕಾಲದಲ್ಲಿ 56 ಡ್ರೋನ್ಗಳನ್ನು ಹಾರಿಸಿತು. ಇದನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಆಕಾಶದಲ್ಲಿಯೇ ನಾಶಪಡಿಸಿತು. ಪಾಕಿಸ್ತಾನದಾದ್ಯಂತ ಕೋಲಾಹಲವಿದೆ.
ಪಾಕಿಸ್ತಾನದಲ್ಲಿ ಒಕ್ಕೂಟದ ಮೇಲೆ ಅವಲಂಬಿತವಾಗಿರುವ ಶಹಬಾಜ್ ಷರೀಫ್ ಸರ್ಕಾರವೂ ಅಪಾಯದಲ್ಲಿದೆ ಎಂದು ನಂಬಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರ ಜೀವಗಳನ್ನು ಬಲಿ ಪಡೆದಿದ್ದರು. ಅಷ್ಟೇ ಅಲ್ಲದೆ ನಿನ್ನದು ಯಾವ ಧರ್ಮ ಎಂದು ಕೇಳಿ, ಕೇವಲ ಹಿಂದೂಗಳ ಮೇಲೆ ಬಲ ಪ್ರಯೋಗ ನಡೆಸಿದ್ದರು.
ಇದರಿಂದ ಆಕ್ರೋಶಗೊಂಡ ಭಾರತವು ಪಾಕಿಸ್ತಾನದ 9 ಕಡೆಗಳಲ್ಲಿ ಉಗ್ರರ ನೆಲೆ ಮೇಲೆ ದಾಳಿ ನಡೆಸಿ ಸುಮ್ಮನಾಗಿತ್ತು. 100 ಉಗ್ರರನ್ನು ಕೊಂದಿತ್ತು. ಇದಾದ ಬಳಿಕ ಪಾಕಿಸ್ತಾನ ಸುಮ್ಮನಿರದೆ ಜಮ್ಮು ಕಾಶ್ಮೀರದಲ್ಲಿ ಮಿಲಿಟರಿ ವ್ಯವಸ್ಥೆ ಮೇಲೆ ಕಣ್ಣು ಹಾಕಿ ನಿನ್ನೆ ದಾಳಿ ಮಾಡಿತ್ತು. ಇದೀಗ ಭಾರತವು ಅದಕ್ಕೆ ಪ್ರತ್ಯುತ್ತರವಾಗಿ ಇಸ್ಲಾಮಾಬಾದ್ ಸೇರಿ ಪಾಕಿಸ್ತಾನದ ಹಲವೆಡೆ ದಾಳಿ ನಡೆಸುತ್ತಿದೆ.ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಧಾನಿ ಷರೀಫ್ ಪ್ರತಿಜ್ಞೆ ಮಾಡಿದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ಅವುಗಳನ್ನು ಹೇಡಿತನದ ಕೃತ್ಯಗಳು ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಅಮೆರಿಕ ಸೇರಿದಂತೆ ಹಲವಾರು ದೇಶಗಳು ಎರಡೂ ರಾಷ್ಟ್ರಗಳು ಸಂಯಮದಿಂದ ವರ್ತಿಸುವಂತೆ ಮತ್ತು ಮತ್ತಷ್ಟು ಮಿಲಿಟರಿ ಮುಖಾಮುಖಿಯನ್ನು ತಪ್ಪಿಸುವಂತೆ ಒತ್ತಾಯಿಸಿವೆ.