ಅಸಂಘಟಿತ ಕಾರ್ಮಿಕರ ಒಕ್ಕೂಟದ ನೂತನ ದಕ್ಷಿಣಕನ್ನಡ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಮಂಗಳೂರು:ದಿನಾಂಕ 22/06/2025 ರಂದು ಸುರತ್ಕಲ್ ನ ಕರ್ನಾಟಕ ರಾಜ್ಯ ಅಸಂಘಟಿತ ಒಕ್ಕೂಟದ ಕಛೇರಿಯಲ್ಲಿ ಸಭೆ ಸೇರಲಾಯಿತು. ಹಾಗೂ ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸದಸ್ಯರೆಲ್ಲಾ ಸೇರಿ ಒಕ್ಕೂಟದ ಸಂಸ್ಥಾಪಕರಾದ ಶ್ರೀ ರಾಜೇಶ್ ಪವಿತ್ರನ್ರವರ ಉಪಸ್ಥಿತಿಯಲ್ಲಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂದೀಪ್ ಅಡ್ಕರವರ ನೇತೃತ್ವದಲ್ಲಿ ದ.ಕ ಜಿಲ್ಲೆಯ ಜಿಲ್ಲಾ ಸಮಿತಿ ಹಾಗೂ ಕ್ಷೇತ್ರ ಸಮಿತಿಯನ್ನು ರಚನೆಯನ್ನು ಪೂರ್ಣಗೊಳಿಸಲಾಯಿತು, ಅಂತೆಯೇ 8 ವಿಧಾನಸಭಾ ಕ್ಷೇತ್ರ ವಾರು ಸಮಿತಿಗಳನ್ನು ರಚಿಸಲಾಯಿತು.


ಅಯ್ಕೆಯಾದ ಪದಾಧಿಕಾರಿಗಳಿಗೆ ಸಂಸ್ಥಾಪಕರಾದ ರಾಜೇಶ್ ಪವಿತ್ರನ್ ರವರು ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ ಅಡ್ಕರವರು ಶಲ್ಯ ಹಾಕಿ ಗೌರವದೊಂದಿಗೆ ಜವಾಬ್ದಾರಿಯನ್ನು ನೀಡಿದರು.
