ಕೃಷ್ಣನ ಊರಿನಲ್ಲಿ ಗಾಂಜಾ ಮಾರಾಟದ ಕನಸು – ಸೆನ್ ಪೊಲೀಸ್ ಬಲೆಗೆ ಬಿದ್ದ ಖದೀಮ

ಉಡುಪಿ:ಆಂಧ್ರಪ್ರದೇಶದ ವಿಜಯವಾಡದಿಂದ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಖದೀಮನೋರ್ವನನ್ನು ಖಾಕಿ ಖೆಡ್ಡಾಗೆ ಬೀಳಿಸಿದೆ.
ಗಾಂಜಾ ಮಾರಲು ಯತ್ನಿಸಿದ ಆರೋಪಿ ಆರೀಬ್ ಅಹಮ್ಮದ್ (31) ಎಂಬುವವನನ್ನು ಉಡುಪಿಯ ಸೆನ್ ಪೊಲೀಸರು ಇದೀಗ ಬಂಧಿಸಿದ್ದಾರೆ.
ಬಂಧಿತ ಆರೀಬ್, ಭಟ್ಕಳ ಗುಲ್ಜಾರ್ ಸ್ಟ್ರೀಟ್ ನಿವಾಸಿ ಎಂದು ತಿಳಿದುಬಂದಿದೆ.
ಬಡಗಬೆಟ್ಟು ಗ್ರಾಮದ ಟ್ಯಾಪ್ಮಿ ರಸ್ತೆಯ ತಾಂಗೋಡೆ ಕ್ರಾಸ್ ಬಳಿ ಮಾರುವಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಯಿಂದ ರೂ.5.75 ಲಕ್ಷ ಮೌಲ್ಯದ 7 kg 304 ಗ್ರಾಂ ಗಾಂಜಾ, 2 ಮೊಬೈಲ್, ರೂ.1,520 ನಗದು ಜಪ್ತಿ ಮಾಡಲಾಗಿದೆ. ಏ.13ರಂದು ವಿಜಯವಾಡದ ಸೈಕಲ್ ರಿಕ್ಷಾವಾಲನಿಂದ ಗಾಂಜಾ ಖರೀದಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.