Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೃಷ್ಣನ ಊರಿನಲ್ಲಿ ಗಾಂಜಾ ಮಾರಾಟದ ಕನಸು – ಸೆನ್‌ ಪೊಲೀಸ್‌ ಬಲೆಗೆ ಬಿದ್ದ ಖದೀಮ

Spread the love

ಉಡುಪಿ:ಆಂಧ್ರಪ್ರದೇಶದ ವಿಜಯವಾಡದಿಂದ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಖದೀಮನೋರ್ವನನ್ನು ಖಾಕಿ ಖೆಡ್ಡಾಗೆ ಬೀಳಿಸಿದೆ.

ಗಾಂಜಾ ಮಾರಲು ಯತ್ನಿಸಿದ ಆರೋಪಿ ಆರೀಬ್‌ ಅಹಮ್ಮದ್‌ (31) ಎಂಬುವವನನ್ನು ಉಡುಪಿಯ ಸೆನ್ ಪೊಲೀಸರು ಇದೀಗ ಬಂಧಿಸಿದ್ದಾರೆ.

ಬಂಧಿತ ಆರೀಬ್​​​​, ಭಟ್ಕಳ ಗುಲ್ಜಾರ್‌ ಸ್ಟ್ರೀಟ್‌ ನಿವಾಸಿ ಎಂದು ತಿಳಿದುಬಂದಿದೆ.
ಬಡಗಬೆಟ್ಟು ಗ್ರಾಮದ ಟ್ಯಾಪ್ಮಿ ರಸ್ತೆಯ ತಾಂಗೋಡೆ ಕ್ರಾಸ್ ಬಳಿ ಮಾರುವಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಯಿಂದ ರೂ.5.75 ಲಕ್ಷ ಮೌಲ್ಯದ 7 kg 304 ಗ್ರಾಂ ಗಾಂಜಾ, 2 ಮೊಬೈಲ್, ರೂ.1,520 ನಗದು ಜಪ್ತಿ ಮಾಡಲಾಗಿದೆ. ಏ.13ರಂದು ವಿಜಯವಾಡದ ಸೈಕಲ್‌ ರಿಕ್ಷಾವಾಲನಿಂದ ಗಾಂಜಾ ಖರೀದಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.


Spread the love
Share:

administrator

Leave a Reply

Your email address will not be published. Required fields are marked *