ಪತ್ನಿ ಕೊಲೆ ಮಾಡಿದ ಡಾಕ್ಟರ್ಗೆ ಕಾಡಿದ ಪಾಪಪ್ರಜ್ಞೆ: ‘ದೇವ್ರೆ, ಕೊಲೆ ವಿಚಾರ ಹೊರಬರದಂತೆ ಕಾಪಾಡಪ್ಪ’ ಅಂತಾ ಧರ್ಮಸ್ಥಳ, ತಿರುಪತಿಗೆ ಟೆಂಪಲ್ ರನ್!

ಬೆಂಗಳೂರು: ಹೆಂಡತಿ ಕೊಲೆ ಮಾಡಿದ ಡಾಕ್ಟರ್ಗೆ ಪ್ರಾಪ ಪ್ರಜ್ಞೆ ಕಾಡಿತ್ತಂತೆ. ಹೀಗಾಗಿ, ‘ದೇವ್ರೆ ಕೊಲೆ ವಿಚಾರ ಹೊರಗೆ ಬಾರದಂತೆ ಕಾಪಾಡಪ್ಪ’ ಅಂತಾ ಧಾರ್ಮಿಕ ಕ್ಷೇತ್ರಗಳಿಗೆ ಎಡತಾಕಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಮಾಹಿತಿ ಬಹಿರಂಗವಾಗಿದೆ.

ಮಾರತ್ ಹಳ್ಳಿಯಲ್ಲಿ ಡಾಕ್ಟರ್ ಪತಿ ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ.ಕೃತಿಕಾಗೆ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿದ್ದ. ವಿಚಾರ ಗೊತ್ತಾದರೆ ಜೈಲು ಸೇರಬೇಕಾಗುತ್ತೆ ಎಂಬ ಆತಂಕ ಕಾಡುತ್ತಿತ್ತು. ಪತ್ನಿ ಡಾ ಕೃತಿಕಾಳಿಗೆ ಡ್ರಗ್ ಕೊಟ್ಟು ಕೊಲೆ ಮಾಡಿದ ಬಳಿಕ ಹಂತಕ ಮಹೇಂದ್ರ ರೆಡ್ಡಿ ಮನಃಶಾಂತಿಗಾಗಿ ಟೆಂಪಲ್ ರನ್ ಮಾಡಿದ್ದಾನೆ
ಹಂತಕ ದೇವಸ್ಥಾನಗಳಿಗೆ ಹೋಗಿ ದೇವರ ಮೊರೆ ಹೋಗಿದ್ದಾನೆ. ಆತಂಕ, ಭಯ ದೂರ ಮಾಡಿಕೊಳ್ಳಲು ಧರ್ಮಸ್ಥಳ, ಚಾಮುಂಡಿ ಬೆಟ್ಟ, ತಿರುಪತಿ, ಕುಕ್ಕೆ ಸೇರಿದಂತೆ ಹತ್ತಾರು ಕಡೆ ಹೋಗಿ, ಪತ್ನಿ ಕೊಲೆ ಕೇಸ್ನಿಂದ ಪಾರು ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದ. ಹತ್ಯೆ ಮಾಡಿದ ಬಳಿಕ ಆರು ತಿಂಗಳ ಅವಧಿಯಲ್ಲಿ ಹಂತಕ ದೇವರ ಮೊರೆ ಹೋಗಿ ಹರಕೆ ಹೊತ್ತಿಕೊಂಡಿದ್ದಾನೆ.
ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿ ಬಂದಿರುವ ಪೋಟೋಗಳನ್ನ ಪರಿಶೀಲನೆ ಮಾಡಿ ಪೊಲೀಸರು ತನಿಖೆ ವೇಳೆ ಕೇಳಿದಾಗ, ಪತ್ನಿ ಹತ್ಯೆಯ ಬಳಿಕ ಟೆಂಪಲ್ ರನ್ ಮಾಡಿರುವ ವಿಚಾರ ಬಹಿರಂಗವಾಗಿದೆ