ಬೈಕ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ವಕೀಲರ ಮೂಗಿನ ಮೂಳೆ ಮುರಿದ ವ್ಯಾಪಾರಿ.

ಮೀರತ್: ಮೀರತ್ನ ಸರ್ರಾಫಾ ಮಾರುಕಟ್ಟೆಗೆ ಬಂದಿದ್ದ ವಕೀಲರೊಬ್ಬರು ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದೀರಿ ಎಂದು ಜಗಳ ಆರಂಭಿಸಿದ ಅಲ್ಲಿನ ಅಂಗಡಿಯ ವ್ಯಾಪಾರಿಯೊಬ್ಬರು ಬಳಿಕ ಆ ವಕೀಲರಿಗೆ ಕ್ರೂರವಾಗಿ ಥಳಿಸಿದ ಘಟನೆ ನಡೆದಿದೆ. ತಮ್ಮ ಮೇಲಾದ ಹಲ್ಲೆಯನ್ನು ವಕೀಲರು ಪ್ರತಿಭಟಿಸಿದಾಗ ಅವರನ್ನು ಕೆಳಗೆ ಬೀಳಿಸಿ ಥಳಿಸಲಾಯಿತು. ಅವರ ಮೂಗಿನ ಮೂಳೆ ಮುರಿದಿದೆ. ಈ ಇಡೀ ಘಟನೆ ಸಿಸಿಟಿವಿಯಲ್ಲಿ (Viral Video) ಸೆರೆಯಾಗಿದೆ.
