ವಿರೂಪಗೊಂಡ ಆಂಜನೇಯ ಮೂರ್ತಿ ಅನುಮಾನಸ್ಪದವಾಗಿ ಪತ್ತೆ

ಚಿತ್ರದುರ್ಗ:ಎಣ್ಣೆಗೆರೆ ಗ್ರಾಮದಲ್ಲಿ ವಿರೂಪಗೊಂಡ ಆಂಜನೇಯ ಸ್ವಾಮಿಯ ಮೂರ್ತಿಯೊಂದು ಪತ್ತೆಯಾಗಿದೆ. ಬುಧವಾರ ಸಂಜೆ 6.30 ಕ್ಕೆ ಈ ಬಗ್ಗೆ ಗ್ರಾಮಸ್ತರು ಮಾಹಿತಿ ನೀಡಿದ್ದಾರೆ.

ಎಣ್ಣೆಗೆರೆ ಗ್ರಾಮದ ಹೊರವಲಯದ ಕಲ್ಲು ಕ್ವಾರಿಯ ಬಳಿ ಸುಮಾರು ಆರು ಅಡಿ ಎತ್ತರದ ಆಂಜನೇಯ ಸ್ವಾಮಿ ದೇವರ ಮೂರ್ತಿ ಇದಾಗಿದ್ದು ನಿರ್ಜನ ಪ್ರದೇಶದಲ್ಲಿ ದೇವರ ಮೂರ್ತಿಯನ್ನ ತಂದು ಇರಿಸಿದ್ದಾರೆ.
ಈ ಆಂಜನೇಯ ಸ್ವಾಮಿಯ ಈ ಮೂರ್ತಿ ಸಂಪೂರ್ಣ ವಿರೂಪಗೊಂಡಿದ್ದು ಕೈ ಕಾಲು ದೇವರ ಗಧೆ ಮುರಿದ ರೀತಿಯಲ್ಲಿ ಪತ್ತೆಯಾಗಿರೋದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನೂ ಯಾರಾದರು ನಿಧಿ ಶೋಧ ಕಾರ್ಯಕ್ಕೆ ದೇವರ ಮೂರ್ತಿಯನ್ನ ವಿರೂಪಗೊಳಿಸಿರಬಹುದು ಎಂಬ ಗುಮಾನಿ ಮೂಡಿದೆ.