Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೀಸಾ ಸಿಗದೇ ಪಾಕಿಸ್ತಾನ ಗಡಿ ದಾಟಿ ಬಾಯಾರಿಕೆಯಿಂದ ಮರಣ ಹೊಂದಿದ ಜೋಡಿ

Spread the love

ರಾಜಸ್ಥಾನ:ಮದುವೆಯಾಗಿ ಭಾರತದಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಈ ನವಜೋಡಿ ಬಯಸಿತ್ತು. ಆದರೆ, ವಿಧಿ ವೀಸಾ ಮೂಲಕ ಈ ದಂಪತಿಗಳನ್ನು ಕಾಡಿದ್ದ. ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ಅಕ್ರಮವಾಗಿ ದಾಟಲು ಯತ್ನಿಸಿದ್ದ ನವ ವಧು-ವರರು ನೀರಿಲ್ಲದೆ ಬಾಯಾರಿಕೆಯಿಂದ ಮೃತಪಟ್ಟಿರುವ ಘಟನೆ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಪ್ರೀತಿಸಿದಾಕೆಯನ್ನು ಮದುವೆಯಾಗಿ ಹೊಸ ಸಂಸಾರ ಕಟ್ಟಿಕೊಂಡು, ತಮ್ಮದೇ ಆದ ಕನಸುಗಳನ್ನು ನವ ದಂಪತಿಗಳು ಹೊತ್ತಿರುತ್ತಾರೆ. ಹೀಗಾಗಿ ಪಾಕಿಸ್ತಾನದ ರವಿ ಕುಮಾರ್ (17) ಮತ್ತು ಶಾಂತಿ ಬಾಯಿ (15) ಭಾರತದಲ್ಲಿ ಬದುಕುವ ಬಗ್ಗೆ ಆಶಯ ಹೊತ್ತು ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪಹಲ್ಗಾಮ್‌ ಭಯೋತ್ಪಾದಕರ ದಾಳಿ ನಂತರ ಇದು ಕೊಂಚ ಕಷ್ಟ. ವೀಸಾ ಬಾರದ ಕಾರಣ ಅವರು ಅಕ್ರಮವಾಗಿ ಭಾರತ-ಪಾಕಿಸ್ತಾನ ಗಡಿಯನ್ನು ದಾಟಲು ಪ್ರಯತ್ನಿಸಿದ್ದರು. ಸದ್ಯ ಈ ಅಪ್ರಾಪ್ತ ವಯಸ್ಕ ಜೋಡಿ ನಿರ್ಜಲೀಕರಣದಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ನಿರ್ಜಲೀಕರಣದಿಂದ ಮೃತ

ವೀಸಾ ಸಿಗದ ಕಾರಣ ಭಾರತದಲ್ಲಿ ಹೊಸ ಜೀವನವನ್ನು ಪ್ರಾರಂಭಿಸಲು ರವಿ ಕುಮಾರ್‌ಮತ್ತು ಶಾಂತಿ ಬಾಯಿ ಅಕ್ರಮವಾಗಿ ಗಡಿ ದಾಟಲು ಯತ್ನಿಸಿದ್ದರು. ಅಕ್ರಮವಾಗಿ ಭಾರತಕ್ಕೆ ಹೋಗೋದು ಬೇಡ ಎಂದು ರವಿ ಕುಮಾರ್ ತಂದೆ ಬೇಡ ಎಂದರೂ ಕೇಳಲಿಲ್ಲ. ಒಂದು ವಾರದ ಹಿಂದೆ ಗಡಿ ದಾಟಿದ ನಂತರ, ಅವರು ದಾರಿ ತಪ್ಪಿ ನಿರ್ಜಲ ಪ್ರದೇಶದಲ್ಲಿ ಸಿಲುಕಿಕೊಂಡರು. ಕುಡಿಯಲು ನೀರಿಲ್ಲದೆ ಬಾಯಾರಿಕೆಯಿಂದ ಸತ್ತಿದ್ದಾರೆ. ಅವರ ಬಳಿ ಇದ್ದ ಖಾಲಿ ಜರ್ರಿ ಕ್ಯಾನ್‌ನಿಂದ ನೀರು ಖಾಲಿಯಾಗಿತ್ತು. ಪೋಷಕರ ಮಾತು ಕಡೆಗಣನೆ ಮಾಡಿ ಗಡಿ ದಾಟಲು ಬಂದ ಅಪ್ರಾಪ್ತ ದಂಪತಿಗಳ ಮೃತದೇಹ ಭಿಭಿಯಾನ್ ಮರುಭೂಮಿಯಲ್ಲಿ ಪತ್ತೆಯಾಗಿವೆ ಎಂದು ಎಸ್ಪಿ ಸುಧೀರ್ ಚೌಧರಿ ಹೇಳಿದರು.
ವೀಸಾ ಸಿಗದ ಕಾರಣ ಅಕ್ರಮವಾಗಿ ಗಡಿ ದಾಟಲು ಯತ್ನ

ರವಿ ಕುಮಾರ್‌ಮತ್ತು ಶಾಂತಿ ಬಾಯಿ ನಾಲ್ಕು ತಿಂಗಳ ಹಿಂದೆ ಪಾಕಿಸ್ತಾನದ ಮಿರ್ಪುರ್ ಮಾಥೆಲೊದಲ್ಲಿ ಮದುವೆಯಾಗಿದ್ದರು. ಭಾರತದಲ್ಲಿ ಹೊಸದಾಗಿ ಜೀವನ ಕಟ್ಟಿಕೊಳ್ಳಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸರಿಯಿಲ್ಲದ ಕಾರಣ ವೀಸಾ ಸಿಗಲಿಲ್ಲ. ಆದರೂ ಅವರು ಕಾಲ್ನಡಿಗೆಯಲ್ಲಿ ಗಡಿ ದಾಟಲು ನಿರ್ಧರಿಸಿದರು. ಸ್ವಲ್ಪವೇ ಇದ್ದ ನೀರಿನಿಂದ ಗಡಿ ದಾಟಲು ಪ್ರಯತ್ನಿಸಿದ್ದರು. ಆದರೆ, ಬಿಸಿಲಿನ ತಾಪ ಮತ್ತು ನೀರಿನ ಕೊರತೆಯಿಂದ ಅವರು ಬಳಲಿದ್ದಾರೆ.

ಸುಮಾರು ಒಂದು ವಾರದ ಹಿಂದೆ ಅವರು ಗಡಿ ದಾಟಿರಬಹುದು ಎಂದು ಅಂದಾಜಿಸಲಾಗಿದೆ. ಮರುಭೂಮಿಯ ಕಠಿಣ ಹವಾಮಾನದಲ್ಲಿ ದಾರಿ ತಪ್ಪಿ ಅವರು ಸತ್ತಿದ್ದಾರೆ.

ರವಿ ಕುಮಾರ್‌ಮತ್ತು ಶಾಂತಿ ಬಾಯಿ ಮೃತದೇಹ ಮರಣೋತ್ತರ ಪರೀಕ್ಷೆಯನ್ನು ವೈದ್ಯಕೀಯ ಮಂಡಳಿ ನಡೆಸಿದೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಸುಧೀರ್ ಚೌಧರಿ ಹೇಳಿದರು.

ಭಾರತ ಸರ್ಕಾರವು ಮೃತದೇಹಗಳನ್ನು ಹಿಂದಿರುಗಿಸಿದರೆ, ಜೈಸಲ್ಮೇರ್‌ನಲ್ಲಿರುವ ಸಂಬಂಧಿಕರು ಸ್ವೀಕರಿಸಲು ಸಿದ್ಧರಿದ್ದಾರೆ. ಒಂದು ವೇಳೆ ಮೃತದೇಹಗಳನ್ನು ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧರಿದ್ದೇವೆ ಎಂದು ಹಿಂದೂ ಪಾಕಿಸ್ತಾನಿ ಡಿಸ್ಪ್ಲೇಸ್ಡ್ ಯೂನಿಯನ್ ಮತ್ತು ಬಾರ್ಡರ್ ಪೀಪಲ್ ಆರ್ಗನೈಸೇಶನ್‌ನ ಜಿಲ್ಲಾ ಸಂಯೋಜಕ ದಿಲೀಪ್ ಸಿಂಗ್ ಸೋಧಾ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *