Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಹಲ್ಗಾಮ್ ದಾಳಿಯಿಂದ ಮನನೊಂದು ಶಿಕ್ಷಕನ ನಿರ್ಧಾರ: ಧರ್ಮ ತ್ಯಜಿಸುತ್ತೇನೆ!

Spread the love

ಪಶ್ಚಿಮ ಬಂಗಾಳ : ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಮನನೊಂದ ಪಶ್ಚಿಮ ಬಂಗಾಳದ ಶಿಕ್ಷಕ ಸಬೀ‌ರ್ ಹುಸೇನ್‌ ಇಸ್ಲಾಂ ಧರ್ಮವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ದಾಳಿಯನ್ನು ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಭಯೋತ್ಪಾದಕರು 28 ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕ್ರೂರವಾಗಿ ಕೊಂದರು. ಈ ದಾಳಿಯಲ್ಲಿ ಇತರ ಅನೇಕ ಪ್ರವಾಸಿಗರು ಗಾಯಗೊಂಡರು. ಈ ಘಟನೆಯ ಬಗ್ಗೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪಹಲ್ಗಾಮ್‌ನಲ್ಲಿ ಜನರನ್ನು ಕೊಲ್ಲುವ ಮೊದಲು, ಭಯೋತ್ಪಾದಕರು ತಾವು ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನು ಖಚಿತಪಡಿಸಿಕೊಂಡರು ಎನ್ನಲಾಗಿದೆ. ಈ ದಾಳಿಯಿಂದ ಮನನೊಂದ ಪಶ್ಚಿಮ ಬಂಗಾಳದ ಮುಸ್ಲಿಂ ಶಿಕ್ಷಕ ಸಬೀರ್ ಹುಸೇನ್ ಇಸ್ಲಾಂ ಧರ್ಮವನ್ನು ತೊರೆಯಲು ನಿರ್ಧರಿಸಿದ್ದಾರೆ.

ಸಬೀರ್ ಅವರು ದಕ್ಷಿಣ 24 ಪರಗಣ ಜಿಲ್ಲೆಯ ಬದುರಿಯಾದ ನಿರ್ಮಾಣ್ ಆದರ್ಶ್ ವಿದ್ಯಾಪೀಠದಲ್ಲಿ ವಿಜ್ಞಾನ ಶಿಕ್ಷಕರಾಗಿದ್ದಾರೆ. ದೇಶದಲ್ಲಿ ಪ್ರತಿದಿನ ಧರ್ಮದ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳು ಸಂಭವಿಸುತ್ತಿದ್ದು, ಇದರಿಂದ ನನಗೆ ತುಂಬಾ ದುಃಖವಾಗಿದೆ ಎಂದು ಶಾಲಾ ಶಿಕ್ಷಕ ಸಬೀರ್ ಹುಸೇನ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಗಾಯಗೊಂಡಿರುವ ಬದುರಿಯಾದ ಸಬೀರ್ ಹುಸೇನ್ ಕೂಡ ಇಸ್ಲಾಂ ತೊರೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಸಬೀರ್ ಹುಸೇನ್, ಹಿಂಸೆಯನ್ನು ಹರಡಲು ಧರ್ಮವನ್ನು ಪದೇ ಪದೇ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಇದು ಸರಿಯಲ್ಲ. ನಾನು ಯಾವುದೇ ಧರ್ಮವನ್ನು ಅಗೌರವಿಸುತ್ತಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ಹಿಂಸೆಯನ್ನು ಹರಡಲು ಧರ್ಮವನ್ನು ಹೇಗೆ ಒಂದು ಅಸ್ತ್ರವಾಗಿ ಬಳಸಲಾಗುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ಇದು ಕಾಶ್ಮೀರದಲ್ಲಿ ಹಲವು ಬಾರಿ ನಡೆದಿದೆ. ನನಗೆ ಇನ್ನು ಸಹಿಸಲು ಸಾಧ್ಯವಿಲ್ಲ. ನಾನು ಯಾವುದೇ ಧಾರ್ಮಿಕ ಗುರುತಿನ ಕಾರಣದಿಂದಾಗಿ ಅಲ್ಲ, ಮನುಷ್ಯನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಬಂದಿದ್ದೇನೆ. ಪಹಲ್ಗಾಮ್‌ನಂತಹ ಹಿಂಸಾತ್ಮಕ ಘಟನೆಗಳಲ್ಲಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಸಬೀರ್ ಹೇಳಿದರು. ಧರ್ಮದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಹೇಗೆ ಸರಿ? ಇದು ನನಗೆ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದಾನೆ.

ಎಲ್ಲವೂ ಧರ್ಮದ ಸುತ್ತ ಸುತ್ತುವ ಜಗತ್ತಿನಲ್ಲಿ ಬದುಕಲು ಬಯಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಧರ್ಮದ ಸುತ್ತ ಸುತ್ತುತ್ತಿರುವಂತೆ ತೋರುತ್ತಿದೆ. ನಾನು ಅಂತಹ ಜಗತ್ತಿನಲ್ಲಿ ಬದುಕಲು ಬಯಸುವುದಿಲ್ಲ ಎಂದಿದ್ದಾರೆ.

ಸಬೀರ್ ಹುಸೇನ್ ಪ್ರಕಾರ, ಅವರು ಈ ನಿರ್ಧಾರವನ್ನು ಮುಕ್ತವಾಗಿ ತೆಗೆದುಕೊಂಡಿದ್ದಾರೆ ಮತ್ತು ಅವರ ಪತ್ನಿ ಮತ್ತು ಮಕ್ಕಳು ಯಾವುದೇ ಮಾರ್ಗವನ್ನು ಆರಿಸಿಕೊಂಡರೂ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದಾಗಿ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *