Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜೈಲಿನಿಂದ ದರ್ಶನ್ ಪತ್ರ: ‘ದಿ ಡೆವಿಲ್’ ಗೆಲ್ಲಿಸಿ; ಪ್ರಚಾರವೇ ನಮ್ಮ ಉತ್ತರ!

Spread the love

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ (The Devil) ಸಿನಿಮಾ ರಾಜ್ಯಾದ್ಯಂತ ರಿಲೀಸ್‌ಗೆ ಕ್ಷಣಗಣನೆಯಷ್ಟೇ ಬಾಕಿಯಿದೆ. ಡೆವಿಲ್ ಬರಮಾಡಿಕೊಳ್ಳಲು 300ಕ್ಕೂ ಹೆಚ್ಚು ಚಿತ್ರಮಂದಿರಗಳು ಈಗಾಗಲೇ ಸಿಂಗಾರಗೊಂಡಿವೆ. ಟ್ರೈಲರ್‌ ಮತ್ತು ಹಾಡುಗಳಿಂದ ನಿರೀಕ್ಷೆ ಮೂಡಿರುವ ಸಿನಿಮಾ ಗುರುವಾರ ಬೆಳಗ್ಗೆಯಿಂದಲೇ ಪ್ರದರ್ಶನ ಆರಂಭಿಸುತ್ತಿದೆ. ಜೈಲಿನಲ್ಲಿದ್ದುಕೊಂಡೇ ಅಭಿಮಾನಿಗಳಿಗೆ ಪತ್ರ ಬರೆದಿರುವ ದರ್ಶನ್, ಸಿನಿಮಾ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಹೌದು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ (Darshan) ಅನುಪಸ್ಥಿತಿಯಲ್ಲಿ ‘ದಿ ಡೆವಿಲ್’ ಬಿಡುಗಡೆಯಾಗುತ್ತಿದೆ. ‘ದಿ ಡೆವಿಲ್’ ರಿಲೀಸ್‌ಗೂ ಮುನ್ನ ಅಭಿಮಾನಿಗಳಿಗೆ ದರ್ಶನ್ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ಅಭಿಮಾನಿಗಳಿಗೆ ದರ್ಶನ್ ಬರೆದಿರುವ ಬಹಿರಂಗ ಪತ್ರವನ್ನ ಪತ್ನಿ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ದರ್ಶನ್ ಬರೆದ ಪತ್ರದಲ್ಲಿ ಏನಿದೆ?
ನನ್ನ ಪ್ರೀತಿಯ ಸೆಲೆಬ್ರಿಟಿಗಳೇ,
ನನ್ನ ಹೃದಯಾಳದ ಈ ಸಂದೇಶವನ್ನು ನಿಮ್ಮ ಪ್ರತಿಯೊಬ್ಬರಿಗೂ ವಿಜಿ ತಲುಪಿಸುತ್ತಿದ್ದಾಳೆ. ನಿಮ್ಮ ಪ್ರತಿಯೊಬ್ಬರ ಬಗ್ಗೆ.. ನಿಮ್ಮ ಪ್ರೀತಿ, ನಿಮ್ಮ ಕಾಳಜಿ, ನಿಮ್ಮ ಬೆಂಬಲ, ರಾಜ್ಯದಾದ್ಯಂತ ಮಾಡುತ್ತಿರುವ ಸಿನಿಮಾ ಪ್ರಚಾರ.. ಇವೆಲ್ಲವನ್ನು ನನಗೆ ವಿಜಿ ತಲುಪಿಸುತ್ತಿದ್ದಾಳೆ. ದೂರದಲ್ಲಿದ್ದರೂ, ಪ್ರತಿಯೊಂದು ಕ್ಷಣವೂ ನಾನು ನಿಮ್ಮ ಉಪಸ್ಥಿತಿಯನ್ನು ಅನುಭವಿಸುತ್ತಿದ್ದೇನೆ.

ನಾನು ನಿಮಗೆ ಒಂದೇ ಒಂದು ವಿಷಯ ಹೇಳಬೇಕು… ಯಾರು ಏನೇ ಹೇಳಿದರೂ ದಯವಿಟ್ಟು ಚಿಂತಿಸಬೇಡಿ. ಯಾವುದೇ ಅಪಪ್ರಚಾರ, ಯಾವುದೇ ವದಂತಿ, ಯಾವುದೇ ನಕಾರಾತ್ಮಕತೆಗೆ ನೀವು ಕಿವಿಗೊಡಬೇಡಿ. ನೀವೇ ನನ್ನ ಬಲ… ನೀವುಗಳೇ ನನ್ನ ಕುಟುಂಬ… ಇಂದು ನಾನು ಬಲವಾಗಿ ನಿಂತಿದ್ದೇನೆ ಅಂದ್ರೆ ಅದಕ್ಕೆ ಕಾರಣ ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ. ಈ ಕ್ಷಣದಲ್ಲಿ ನನ್ನ ದೊಡ್ಡ ಶಕ್ತಿ ನೀವು. ಆದ್ದರಿಂದ, ದಯವಿಟ್ಟು ಯಾವುದಕ್ಕೂ ಚಿಂತೆ ಮಾಡದೆ, ನಿಮ್ಮ ಪ್ರೀತಿ ಮತ್ತು ಶಕ್ತಿಯನ್ನು ನಮ್ಮ ಚಿತ್ರ ‘ದಿ ಡೆವಿಲ್’ ಕಡೆಗೆ ಹರಿಸಿ.

ನನ್ನ ಮೇಲೆ ಇಟ್ಟಿರುವ ಪ್ರೀತಿಯನ್ನ ನೀವು ‘ದಿ ಡೆವಿಲ್’ ಚಿತ್ರದ ಮೇಲೂ ತೋರಿಸುತ್ತೀರಿ, ಚಿತ್ರಕ್ಕೆ ಬೆಂಬಲ ನೀಡುತ್ತೀರಿ ಎಂದು ನನಗೆ ಗೊತ್ತು. ನಾನು ಅಲ್ಲಿ ಇರದಿದ್ದರೂ, ಪ್ರತಿಯೊಂದು ಪ್ರಶ್ನೆಗೆ, ಪ್ರತಿಯೊಂದು ಅನುಮಾನಕ್ಕೆ, ಪ್ರತಿಯೊಂದು ಶಬ್ದಕ್ಕೆ… ಮಾತಿನಿಂದಲ್ಲ, ಈ ಚಿತ್ರದ ಯಶಸ್ಸಿನಿಂದ ಘರ್ಜಿಸಿ ಉತ್ತರ ಕೊಡಿ. ಅದೇ ನಿಮ್ಮ ಧ್ವನಿ. ಅದೇ ನಮ್ಮ ಉತ್ತರ.

ನಿಮ್ಮ ಪ್ರಚಾರ, ನಿಮ್ಮ ಸಮರ್ಪಣೆ, ನಿಮ್ಮ ಏಕತೆ.. ಇವುಗಳ ಕುರಿತು ಕೇಳಿದಾಗ ನನ್ನ ಹೃದಯ ತುಂಬಿ ಬರುತ್ತದೆ . ನಾನು ಮತ್ತೆ ನಿಮ್ಮನ್ನೆಲ್ಲಾ ನೋಡುವ ದಿನಕ್ಕಾಗಿ ಕಾಯುತ್ತಿದ್ದೇನೆ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು, ನನ್ನ ಸುತ್ತ ಗಟ್ಟಿಯಾಗಿ ನಿಂತಿದ್ದಕ್ಕೆ ಧನ್ಯವಾದಗಳನ್ನ ತಿಳಿಸಲು ಕಾಯುತ್ತಿದ್ದೇನೆ. ನೀವೆಲ್ಲರೂ ನನ್ನ ಮೇಲೆ ಇಟ್ಟಿರುವ ನಂಬಿಕೆಯ ಹಾಗೆ, ನಾನು ನಿಮ್ಮ ಪ್ರತಿಯೊಬ್ಬರ ಮೇಲೂ ನಂಬಿಕೆ ಇಟ್ಟಿದ್ದೇನೆ. ಮತ್ತೊಂದು ವಿಷಯ ನೆನಪಿಡಿ.. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಅಲ್ಲಿಯವರೆಗೂ ನಿಮ್ಮ ಪ್ರೀತಿ ಅಚಲವಾಗಿರಲಿ. ನಿಮ್ಮೆಲ್ಲರ ಪ್ರೀತಿಯೊಂದಿಗೆ….


Spread the love
Share:

administrator

Leave a Reply

Your email address will not be published. Required fields are marked *