ತುಂಗಭದ್ರಾ ನದಿ ದಾಟಿ ಅಂತ್ಯಸಂಸ್ಕಾರ: ಶವ ಹೊತ್ತ ಗ್ರಾಮಸ್ಥರ ವೈದಿಕ ಸಂಸ್ಕಾರ

ರಾಯಚೂರು: ಭುಜದ ಮೇಲೆ ಮೃತದೇಹ ಹೊತ್ತು ಗ್ರಾಮಸ್ಥರು ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯನ್ನು ದಾಟಿದ ಘಟನೆಯೊಂದು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ. ಮಾರೆಮ್ಮಾ(84) ಎಂಬ ವೃದ್ಧೆ ಮೃತಪಟ್ಟಿದ್ದು, ಜನರು ಅಂತ್ಯಸಂಸ್ಕಾರಕ್ಕೆಪರದಾಡಿದ್ದಾರೆ. ಮುಕ್ಕುಂದ ಗ್ರಾಮದಲ್ಲಿ ಸಾರ್ವಜನಿಕ ರುದ್ರ ಭೂಮಿ ಇಲ್ಲದ ಹಿನ್ನೆಲೆ ತುಂಗಭದ್ರಾ ನದಿಯಲ್ಲಿರುವ ನಡುಗಡ್ಡೆಯಲ್ಲಿ ಗ್ರಾಮಸ್ಥರಿಂದ ಮೃತರ ಅಂತ್ಯ ಸಂಸ್ಕಾರ ಮಾಡಲಾಗಿದೆ.

