ಗೋವು ಕಳ್ಳಸಾಗಣೆ ಸಂಘರ್ಷ: ಭದ್ರಕ್ನಲ್ಲಿ ಇಂಟರ್ನೆಟ್ ಸ್ಥಗಿತ ವಿಸ್ತರಣೆ

ಭುವನೇಶ್ವರ: ಗೋವು ಕಳ್ಳಸಾಗಣೆ ಸಂಬಂಧಿತ ಸಂಘರ್ಷದಲ್ಲಿ ವ್ಯಕ್ತಿಯೊಬ್ಬ ಮೃ*ತಪಟ್ಟ ಬಳಿಕ ಒಡಿಶಾದ ಭದ್ರಕ್ನಲ್ಲಿ ಜೂ.12ರಿಂದ ಜಾರಿಗೊಳಿಸಿರುವ ಇಂಟರ್ನೆಟ್ ಸ್ಥಗಿತವನ್ನು ಮತ್ತಷ್ಟು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ. ಶಾಂತಿ ಕಾಪಾಡಲು, ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಭದ್ರಕ್ ಮಹಾನಗರ ಪಾಲಿಕೆ ವ್ಯಾಪ್ತಿ 5 ಸ್ಥಳಗಳಲ್ಲಿ ಇಂಟರ್ನೆಟ್ ಅಮಾನತು ಮಾಡಲಾಗಿತ್ತು.
ಅದನ್ನು ಶುಕ್ರವಾರದವರೆಗೆ ವಿಸ್ತರಿಸಲಾಗಿದೆ. ಮೇ 30ರಂದು ಹಳ್ಳಿಯೊಂದರಲ್ಲಿ ದನ ಕಳ್ಳಸಾಗಣೆ ಸಂಬಂಧ ನಡೆದ ಘರ್ಷಣೆಯಲ್ಲಿ ಸಂತೋಷ್ ಪರಿದಾ ಮೃ*ತಪಟ್ಟಿದ್ದನು.