ಸುಪ್ರೀಂ ಕೋರ್ಟ್ ಗಾರ್ಡನ್ನಲ್ಲಿ ಗುಲಾಬಿ ಹೂವಿಗಾಗಿ ವಿವಾದ

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ (Supreme Court) ಈ ಬಾರಿ ತನ್ನ ಪ್ರಕರಣಗಳು ಮತ್ತು ತೀರ್ಪುಗಳಿಗಾಗಿ ಜನರ ಗಮನ ಸೆಳೆಯುವ ಬದಲು ಒಂದು ವಿಚಿತ್ರ ಕಾರಣಕ್ಕಾಗಿ ಸುದ್ದಿ ಮಾಡಿದೆ. ಮಹಿಳೆಯೊಬ್ಬಳು ಸುಪ್ರೀಂ ಕೋರ್ಟ್ ಗಾರ್ಡನ್ನಿಂದ ಗುಲಾಬಿ ಹೂವುಗಳನ್ನು ಕೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಅವಳು ಪಶ್ಚಾತ್ತಾಪ ಪಡಲಿಲ್ಲ. ಕೋರ್ಟಿನಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂತಹ ಅದೆಷ್ಟೋ ಪ್ರಕರಣಗಳು ತೀರ್ಪು ಹೊರಬರದೆ ಬಾಕಿ ಉಳಿದಿದೆ. ಆ ಬಗ್ಗೆ ಯಾರೂ ಮಾತಾಡುವುದಿಲ್ಲ. ಆದರೆ, ನಾನು ಹೂವು ಕೊಯ್ದಿದ್ದನ್ನೇ ಅಪರಾಧವೆಂಬಂತೆ ನೋಡುತ್ತಿದ್ದೀರಿ ಎಂದು ಆಕೆ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾಳೆ.