Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಸ್.ಪಿ ಮತ್ತು ಕಮಿಷನರ್ ವರ್ಗಾವಣೆಗೆ ಸಂಚು: ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ “ದಿ ಸ್ಯಾಫ್ರನ್ ಫ್ರಂಟ್” (TSF)

Spread the love

ಮಂಗಳೂರು: ದಕ್ಷಿಣ ಕನ್ನಡದ ಶಾಂತಿಯನ್ನು ಕದಡಲು ಹೊಂಚು ಹಾಕುತ್ತಿರುವ ಶಕ್ತಿಗಳಿಗೆ ಬ್ರೇಕ್ ಹಾಕಿ, ನಗರದಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿರುವ ನೂತನ ಎಸ್.ಪಿ ಹಾಗೂ ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡುವ ಯಾವುದೇ ರಾಜಕೀಯ ನಾಟಕಗಳನ್ನು “ದಿ ಸ್ಯಾಫ್ರನ್ ಫ್ರಂಟ್” (TSF) ಸಹಿಸುವುದಿಲ್ಲ. ಅಧಿಕಾರಿಗಳ ದಕ್ಷತೆಗೆ ರಾಜಕೀಯ ಬಣ್ಣ ಹಚ್ಚಿ ಅವರನ್ನು ಎತ್ತಂಗಡಿ ಮಾಡಲು ನಡೆಯುತ್ತಿರುವ ತೆರೆಮರೆಯ ಹುನ್ನಾರಗಳನ್ನು ರಾಷ್ಟ್ರೀಯ ನಾಯಕರಾದ ರಾಜೇಶ್ ಪವಿತ್ರನ್ ಕಟುವಾಗಿ ಖಂಡಿಸಿದ್ದಾರೆ.

“ಮಂಗಳೂರು ದೀರ್ಘಕಾಲದ ನಂತರ ನಿಟ್ಟುಸಿರು ಬಿಡುತ್ತಿದೆ. ಕೋಮು ಸಂಘರ್ಷ ಮತ್ತು ಅಶಾಂತಿಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸಮಾಜವಿರೋಧಿ ಶಕ್ತಿಗಳು, ತಮ್ಮ ಸ್ವಾರ್ಥಕ್ಕಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ಜಿಲ್ಲೆಯಿಂದ ಹೊರಹಾಕಲು ಸರ್ಕಾರಕ್ಕೆ ಒತ್ತಡ ಹೇರುತ್ತಿರುವುದು ಅಕ್ಷಮ್ಯ ಅಪರಾಧ. ಇಂತಹ ಪಿತೂರಿಗಳ ಮೂಲಕ ಜಿಲ್ಲೆಯನ್ನು ಮತ್ತೆ ಅರಾಜಕತೆಗೆ ತಳ್ಳಲು ನಾವು ಬಿಡುವುದಿಲ್ಲ. ಅಧಿಕಾರಿಗಳನ್ನು ವರ್ಗಾಯಿಸುವುದು ಎಂದರೆ ಅದು ಅಪರಾಧಿಗಳಿಗೆ ನೀಡುವ ಮನ್ನಣೆಯಂತಾಗುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

TSF ಆಗ್ರಹಗಳು:
ರಾಜಕೀಯ ಹಸ್ತಕ್ಷೇಪ ನಿಲ್ಲಲಿ: ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಗಳಾಗಬಾರದು. ರಾಜಕೀಯ ಒತ್ತಡ ಹೇರಿ ಅಧಿಕಾರಿಗಳನ್ನು ವರ್ಗಾಯಿಸುವುದು ಹಾಗೂ ತಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳನ್ನು ತರಲು ಪ್ರಯತ್ನಿಸುವುದು ಜಿಲ್ಲೆಯ ಭವಿಷ್ಯಕ್ಕೆ ಮಾರಕ.

ಅವಧಿಗೆ ಮುನ್ನ ವರ್ಗಾವಣೆ ಸಲ್ಲದು: ಜಿಲ್ಲೆಯ ಶಾಂತಿಯನ್ನು ಕಾಪಾಡುತ್ತಿರುವ ಅಧಿಕಾರಿಗಳನ್ನು ಅವರ ನಿಗದಿತ ಅವಧಿ ಮುಗಿಯುವ ಮೊದಲೇ ವರ್ಗಾವಣೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು.

ಬೃಹತ್ ಪ್ರತಿಭಟನೆಯ ಎಚ್ಚರಿಕೆ: ಒಂದು ವೇಳೆ ರಾಜಕೀಯ ಒತ್ತಡಕ್ಕೆ ಮಣಿದು ಈ ಇಬ್ಬರು ಅಧಿಕಾರಿಗಳ ವರ್ಗಾವಣೆಯಾದರೆ TSF ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

“ಸರ್ಕಾರವು ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳ ಬೆನ್ನಿಗೆ ನಿಲ್ಲಬೇಕು. ಒಂದು ವೇಳೆ ರಾಜಕೀಯ ಲಾಭಕ್ಕಾಗಿ ಕಮಿಷನರ್ ಮತ್ತು ಎಸ್.ಪಿ ಅವರನ್ನು ವರ್ಗಾವಣೆ ಮಾಡಿದರೆ, ಟಿ.ಎಸ್.ಎಫ್ ಕಾರ್ಯಕರ್ತರು ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದ್ದಾರೆ” ಎಂದು ರಾಜೇಶ್ ಪವಿತ್ರನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ನೇರ ಎಚ್ಚರಿಕೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *