Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಧಾರ್ ಕಾರ್ಡ್ ವಿಚಾರಕ್ಕೆ ಕಂಡಕ್ಟರ್‌ಗೆ ಪ್ರಜ್ಞೆ ತಪ್ಪುವಂತೆ ಹ*ಲ್ಲೆ

Spread the love

ವಾಡಿ: ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಟಿಕೆಟ್‌ ನೀಡಲು ಆಧಾರ್‌ ಕಾರ್ಡ್‌ ಕೇಳಿದ ಕಂಡಕ್ಟರ್‌ ಮೇಲೆ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆ ವಾಡಿ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ.

ಘಟನೆ ವಿವರ: ಕಲಬುರಗಿ-ಯಾದಗಿರಿ ನಡುವೆ ಸಂಚರಿಸುತ್ತಿದ್ದ ಬಸ್‌ಗೆ ರಾವೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಹತ್ತಿದ್ದಾರೆ.

ಟಿಕೆಟ್‌ ಪಡೆಯುವ ವೇಳೆ ಝರಾಕ್ಸ್‌ ಪ್ರತಿ ತೋರಿಸಿದ್ದಾರೆ. ಕಂಡಕ್ಟರ್‌ ಅರ್ಜುನ ನಾಗಪ್ಪ ಕಟ್ಟಿಮನಿ ಅವರು ಓರಿಜಿನಲ್‌ ತೋರಿಸಿ ಎಂದು ಹೇಳಿ, ಇತರರಿಗೆ ಟಿಕೆಟ್‌ ನೀಡಲು ಹೋಗಿದ್ದಾರೆ. ವಾಪಸ್‌ ಮಹಿಳೆ ಬಳಿ ಬಂದಾಗ, ಬೇರೆಯವರ ಆಧಾರ್‌ ಕಾರ್ಡ್‌ ತೋರಿಸಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್‌ ಹಣ ಕೊಟ್ಟು ಟಿಕೆಟ್‌ ಪಡೆಯಿರಿ, ಇಲ್ಲವೇ ಬಸ್‌ನಿಂದ ಇಳಿಯಿರಿ ಎಂದಿದ್ದಾರೆ. ಹಣಕೊಟ್ಟು ಟಿಕೆಟ್‌ ಪಡೆದ ಮಹಿಳೆ, ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಬಸ್‌ ವಾಡಿ ಪಟ್ಟಣಕ್ಕೆ ಬರುತ್ತಿದ್ದಂತೆ ಮಹಿಳೆ ಕಡೆಯ ಯುವಕರು ಕಂಡಕ್ಟರ್‌ನನ್ನು ಥಳಿಸಿದ್ದಾರೆ. ಉಸಿರಾಟ ತೊಂದರೆ ಅನುಭವಿಸಿದ ಕಂಡಕ್ಟರ್‌ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪಿಎಸ್‌ಐ ಕೆ.ತಿರುಮಲೇಶ ಹಾಗೂ ಸಿಬ್ಬಂದಿ, ಕಂಡಕ್ಟರ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಹಲ್ಲೆ ನಡೆಸಿದವರ ವಿರುದ್ಧ ಬಸ್ ಚಾಲಕ ದೂರು ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *