Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಸೇನಾ ದಾಳಿಗೆ ಚೀನಾದ ಪ್ರತಿಕ್ರಿಯೆ: “ವಿಷಾದಕರ!” – ಶಾಂತಿಯ ಚಹರೆ ಅಥವಾ ಪಾಕ್ ಪರ ಭಾವನೆ?

Spread the love

ಬೀಜಿಂಗ್:‌ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು “ಆಪರೇಷನ್‌ ಸಿಂಧೂರ” ಹೆಸರಿನ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಈ ಕ್ಷಿಪ್ರ ದಾಳಿಗೆ ಪಾಕಿಸ್ತಾನ ಅಕ್ಷರಶಃ ನಲುಗಿದ್ದು, ಪ್ರತೀಕಾರದ ದಾಳಿಯ ಮಾತುಗಳನ್ನಾಡಿದೆ. ಆದರೆ ಚೀನಾ ಮಾತ್ರ ಈ ದಾಳಿಯನ್ನು “ವಿಷಾದಕರ” ಎಂದು ಬಣ್ಣಿಸಿದೆ.‌ ಈ ಕುರಿತು ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝೆಂಗ್‌ ಶಾಂಗ್, “ಭಾರತೀಯ ಸೇನಾ ಕಾರ್ಯಾಚರಣೆ ವಿಷಾದದ ಸಂಗತಿಯಾಗಿದ್ದು, ಉಭಯ ದೇಶಗಳು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಬೇಕು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸಬೇಕು” ಎಂದು ಮನವಿ ಮಾಡಿದ್ದಾರೆ. “ನಾವು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ಭವವಾಗಿರುವ ಗಡಿ ಉದ್ವಿಗ್ನತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಬೆಳವಣಿಗೆಗಳು ಆಘಾತಕಾರಿ ಎಂದು ನಾವು ನಂಬುತ್ತೇವೆ. ಹೀಗಾಗಿ ಉಭಯ ದೇಶಗಳು ಸಂಯಮದಿಂದ ವರ್ತಿಸುವ ಮೂಲಕ, ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಬೇಕು” ಎಂದು ಝೆಂಗ್‌ ಶಾಂಗ್ ಆಗ್ರಹಿಸಿದ್ದಾರೆ. “ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರಗಳಾಗಿದ್ದು, ಇವುಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಬಗ್ಗೆ ನಮಗೆ ಕಾಳಜಿ ಇದೆ. ಪ್ರಾದೇಶಿಕ ಅಶಾಂತಿಗೆ ಕಾರಣವಾಗುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು, ಉಭಯ ದೇಶಗಳು ಗಂಭೀರವಾಗಿ ಚಿಂತಿಸಬೇಕು” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಸಲಹೆ ನೀಡಿದ್ದಾರೆ. ಇನ್ನು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಹೇಳಿರುವ ಚೀನಾ, ಇದೊಂದು “ವಿಷಾದಕರ ಘಟನೆ” ಎಂದು ಹೇಳಿದೆ. ಇಂತಹ ಕಾರ್ಯಾಚರಣೆಗಳು ಶಾಂತಿ ಪ್ರಯತ್ನಗಳಿಗೆ ಭಂಗ ತರಬಹುದು ಎಂದು ಡ್ರ್ಯಾಗನ್‌ ರಾಷ್ಟ್ರ ಎಚ್ಚರಿಕೆ ನೀಡಿದೆ. ಪಹಲ್ಗಾಮ್‌ ದಾಳಿಯ ಬಳಿಕವೂ ಇಂತದ್ದೇ ಪ್ರತಿಕ್ರಿಯೆ ನೀಡಿದ್ದ ಚೀನಾ, ಸಂಯಮದಿಂದ ವರ್ತಿಸುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು. ಆದರೆ ಪಹಲ್ಗಾಮ್‌ ದಾಳಿಯ ಕುರಿತು ಭಾರತೀಯರ ಆಕ್ರೋಶವನ್ನು ಮನಗಾಣುವಲ್ಲಿ ಚೀನಾ ಅಷ್ಟೊಂದು ಯಶಸ್ವಿಯಾಗಿಲ್ಲ ಎಂದು ತೋರುತ್ತದೆ. ಪಹಕ್ಗಾಮ್‌ ದಾಳಿಯ ಬಳಿಕ ಅಮೆರಿಕ, ರಷ್ಯಾ, ಜರ್ಮನಿ, ಬ್ರಿಟನ್‌, ಫ್ರಾನ್ಸ್‌ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದವು. ಈ ರಾಷ್ಟ್ರಗಳು ಪ್ರಾದೇಶಿಕ ಶಾಂತಿಗೆ ಕರೆ ನೀಡಿದ್ದರೂ, ಭಾರತದ ಆಕ್ರೋಶವನ್ನು ಗೌರವಿಸುವುದಾಗಿ ಹೇಳಿದ್ದವು. ಆದರೆ ಚೀನಾ ಮಾತ್ರ ಪಾಕಿಸ್ತಾನವನ್ನು ಮೆಚ್ಚಿಸುವ ಕಾರ್ಯದಲ್ಲಿ ನಿರತವಾಗಿದ್ದು, ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು “ವಿಷಾದಕರ” ಎಂದು ಬಣ್ಣಿಸಿರುವುದು ವಿಪರ್ಯಾಸ.

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ, “ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ” ಎಂದು ಹೇಳಿದೆ. ಅಲ್ಲದೇ ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ಖಚಿತಪಡಿಸಿವೆ.


Spread the love
Share:

administrator

Leave a Reply

Your email address will not be published. Required fields are marked *