Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕ್ಕಮಗಳೂರು: ಅರಣ್ಯಕ್ಕೆ ಜಾನುವಾರು ಪ್ರವೇಶ ನಿಷೇಧ, ಮಲೆನಾಡಿನ ರೈತರಲ್ಲಿ ತೀವ್ರ ಆಕ್ರೋಶ!

Spread the love

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲು ಸೀಮೆಯ ಜನರು ಈಗಾಗಲೇ ಅರಣ್ಯ ಸಮಸ್ಯೆಯಿಂದ ಹತ್ತು-ಹಲವು ಭೂ-ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈಗ ಸರಕಾರ ರೈತರು ಕಾಡಿಗೆ ದನ-ಕರುಗಳನ್ನು ಬೀಡುವಂತಿಲ್ಲಎಂಬ ಆದೇಶವನ್ನು ಮಾಡಿ ದನದ ಕೊಟ್ಟಿಗೆ ಬಾಗಿಲಿಗೂ ಬಂದಿರುವುದು ಮಲೆನಾಡಿಗರಲ್ಲಿ ಮತ್ತಷ್ಟು ಆತಂಕದ ಜತೆಗೆ ಆಕ್ರೋಶಕ್ಕೂ ಕಾರಣವಾಗಿದೆ.

ಅತಿಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನರು ಮೀಸಲು ಅರಣ್ಯ, ಪರಿಭಾವಿತ ಅರಣ್ಯ, ಜಿಲ್ಲಾಧಿಕಾರಿ ಮೀಸಲಿಟ್ಟ ಅರಣ್ಯ ಸೇರಿದಂತೆ ಸೆಕ್ಷನ್‌-4, ಸೆಕ್ಷನ್‌-4(1) ಸಮಸ್ಯೆಯನ್ನು ಈಗಲೂ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿರಾಜ್ಯದ ಅರಣ್ಯ ಪ್ರದೇಶದೊಳಗೆ ದನ-ಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ಮುಂದಾಗಿರುವ ಅರಣ್ಯ ಇಲಾಖೆ ಕ್ರಮದ ಬಗ್ಗೆ ಮಲೆನಾಡಿನಲ್ಲಿಬಿರುಸಿನ ಚರ್ಚೆ ನಡೆದಿದ್ದು, ಸರಕಾರದ ವಿರುದ್ಧ ಆಕ್ರೋಶಗಳು ಸಹ ವ್ಯಕ್ತವಾಗುತ್ತಿವೆ.

ಸರಕಾರದ ನಿರ್ಧಾರಕ್ಕೆ ವಿರೋಧ

ಜಿಲ್ಲೆಯ ಮಲೆನಾಡಿನಲ್ಲಿಮಲೆನಾಡು ಗಿಡ್ಡ, ಬಯಲು ಭಾಗದಲ್ಲಿಅಮೃತ್‌ ಮಹಲ್‌ ತಳಿ ಹೆಸರುವಾಸಿಯಾಗಿವೆ. ಇದರ ಜತೆಗೆ ಬಯಲು ಭಾಗದ ಜನರು ದನ, ಎಮ್ಮೆ, ಕುರಿಗಳನ್ನು ಮೇಯಿಸಲು ಬಹುತೇಕ ಗ್ರಾಮದ ಅಂಚಿನ ಕಾಡುಗಳನ್ನೇ ನಂಬಿಕೊಂಡಿದ್ದಾರೆ. ಅದರಲ್ಲೂಗ್ರಾಮದ ಎಲ್ಲಜಜಾನುವಾರುಗಳನ್ನು ಒಟ್ಟು ಸೇರಿಸಿ ಕಾಡಿಗೆ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಬರುವುದು ತಲತಲಾಂತರದಿಂದ ಬಯಲು ಭಾಗದಲ್ಲಿಪದ್ಧತಿಯಾಗಿದೆ. ಅದೇ ಪದ್ಧತಿ ಇಂದಿಗೂ ಜೀವಂತವಾಗಿದೆ. ಈಗ ಸರಕಾರ ಏಕಾಏಕಿ ಕಾಡಿಗೆ ಜಾನುವಾರು ಹೋಗುವಂತಿಲ್ಲಅಂದರೆ ಮಳೆಗಾಲದಲ್ಲೂಸಹ ಮನೆಯಲ್ಲಿಯೇ ಜಾನುವಾರು ಕಟ್ಟಿ ಮೇಯಿಸುವ ಪರಿಸ್ಥಿತಿ ರೈತರದ್ದಾಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಸಹ ಉದ್ಭವವಾಗುತ್ತವೆ.

ವಲಸಿಗರಿಗೂ ಆಪತ್ತು :

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಸಾವಿರಾರು ಕುರಿಗಳ ಹಿಂಡು ಮಲೆನಾಡು, ಅರೆ ಮಲೆನಾಡಿನತ್ತ ಬರುತ್ತವೆ. ಬೆಳಗ್ಗೆ ಸಮಯದಲ್ಲಿಕಾಡಲ್ಲಿಮೇಯ್ದು ರಾತ್ರಿ ಖಾಸಗಿ ಜಮೀನಿನಲ್ಲಿಉಳಿದು ಆದಾಯ ಮಾಡಿಕೊಳ್ಳುವ ಪ್ರಕ್ರಿಯೆಯೂ ಇದೆ. ಆದರೆ, ಸರಕಾರದ ಈ ಆದೇಶದಿಂದ ರೈತರು ಮತ್ತು ಜಾನುವಾರು ಮಾಲೀಕರ ಆದಾಯಕ್ಕೂ ಪೆಟ್ಟು ಬೀಳುತ್ತದೆ.

ಸಂಘರ್ಷಕ್ಕೆ ರಹದಾರಿ

ಈಗಾಗಲೇ ಜಿಲ್ಲೆಯಲ್ಲಿಅರಣ್ಯ ಇಲಾಖೆ ವಿರುದ್ಧ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿವೆ. ಇದರ ನಡುವೆ ಹೊಸ ಆದೇಶ ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗಲಿದೆ. ಈಗಾಗಲೇ ಜನರು ಅರಣ್ಯ-ಕಂದಾಯ ಭೂಮಿಗಳ ಬಗ್ಗೆ ಸ್ಪಷ್ಟವಾದ ಗಡಿರೇಖೆಗಳಾಗಲಿ, ನಿರ್ಬಂಧಗಳಾಗಲಿ ಇಲ್ಲದಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ-ಕಾಡಂಚಿನ ರೈತರಿಗೆ ತಾಕಲಾಟ ಆಗುವುದು ಸಹಜ. ಈ ನಿಯಮ ಅನುಪಾಲನೆಗೆ ಅರಣ್ಯ ಇಲಾಖೆ ಹೊರಟರೆ ಖಂಡಿತಾ ಸಂಘರ್ಷಗಳು ಆರಂಭಗೊಳ್ಳುತ್ತವೆ ಎಂಬುದು ರೈತ ಮುಖಂಡ ಮಂಜುನಾಥ್‌ ಅಭಿಪ್ರಾಯ.

ಅರಣ್ಯಕ್ಕೆ ಜಾನುವಾರು ಪ್ರವೇಶ ನಿರ್ಬಂಧಿಸಿ ಸರಕಾರ ನಿರ್ಧಾರ ಹೊರಡಿಸಿರುವುದು ಖಂಡನೀಯ. ಈಗಾಗಲೇ ರೈತರು ಹಲವು ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಇದರ ನಡುವೆ ಅವರ ಕೊಟ್ಟಿಗೆ ಬಾಗಿಲಿಗೂ ಸರಕಾರ ಬೀಗ ಜಡಿಯುವ ಕೆಲಸ ಮಾಡಲು ಹೊರಟಿರುವುದು ಸರಿಯಾದ ಕ್ರಮ ಅಲ್ಲ.


Spread the love
Share:

administrator

Leave a Reply

Your email address will not be published. Required fields are marked *