Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿಕ್ಕಮಗಳೂರು: ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕನ ಶವ ಮಂಗಳವಾರ ಪತ್ತೆ

Spread the love

ಚಿಕ್ಕಮಗಳೂರು: ಭಾನುವಾರ ಸ್ನೇಹಿತರ ಜೊತೆ ತುಂಗಾ ನದಿಗೆ ಈಜಲು ಬಂದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಹರಿಹರಪುರದ ಗುರುಕುಲ ಬಳಿ ಮಂಗಳವಾರ ಪತ್ತೆಯಾಗಿದೆ.

ಮನೋಜ್ ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಮನೋಜ್ ಕಳೆದ ಭಾನುವಾರ ತನ್ನ ಆರು ಜನ ಸ್ನೇಹಿತರ ಜೊತೆ ಕೊಪ್ಪ ತಾಲೂಕಿನ ನುಗ್ಗೆಮಕ್ಕಿ ಗ್ರಾಮದ ಬಳಿ ಇರುವ ತುಂಗಾ ನದಿಗೆ ಈಜಲು ಹೋಗಿದ್ದಾನೆ ಈ ವೇಳೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ವಿಷಯ ತಿಳಿದ ಕೂಡಲೇ ಸ್ಥಳೀಯರು, ಅಗ್ನಿಶಾಮಕ ತಂಡ, ಪೊಲೀಸರು ತುಂಗಾ ನದಿಯಲ್ಲಿ ನಾಪತ್ತೆಯಾಗಿದ್ದ ಮನೋಜ್ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ ಆದರೆ ಎಲ್ಲೂ ಪತ್ತೆಯಾಗಿಲ್ಲ, ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ನಡೆಸಿದ್ದು ಅದರಂತೆ ಮಂಗಳವಾರ ಹರಿಹರಪುರದ ಗುರುಕುಲ ಬಳಿ ಮನೋಜ್ ಮೃತದೇಹ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *