ಒಂದು ರಾತ್ರಿಯಲ್ಲಿ ನಿರ್ಮಿತವಾದ ಮೆಟ್ಟಿಲುಗಳ ಮಂತ್ರಾಲಯ ಚಾಂದ್ ಬಾವರಿ

ಪ್ರಾಚೀನ ಕಾಲದಲ್ಲಿ ರಾಜರು ಮತ್ತು ಮಹಾರಾಜರು ನೀರಿನ ನಿರ್ವಹಣೆ ಹಾಗೂ ವಾಸ್ತುಶಿಲ್ಪಕ್ಕಾಗಿ ಬಾವಿಗಳನ್ನು ನಿರ್ಮಿಸುತ್ತಿದ್ದರು. ಈ ಬಾವಿಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುತ್ತಿದ್ದವು. ಹಾಗಾಗಿ, ಭಾರತದ ವಿವಿಧ ರಾಜ್ಯಗಳಲ್ಲಿ ಮೆಟ್ಟಿಲುಬಾವಿಗಳನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಅದಂತೆ, ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 97 ಕಿಲೋಮೀಟರ್ ದೂರದಲ್ಲಿರುವ ದೌಸಾ ಜಿಲ್ಲೆಯ ಅಭನೇರಿ ಗ್ರಾಮದಲ್ಲಿರುವ ಚಾಂದ್ ಬಾವರಿಯೂ ಒಂದು ಅತ್ಯಂತ ನಿಗೂಢ ಮೆಟ್ಟಿಲುಬಾವಿಯಾಗಿದೆ. ಇದನ್ನು ಕೇವಲ ಒಂದು ರಾತ್ರಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಗುರ್ಜರ್ ಪ್ರತಿಹಾರ ರಾಜವಂಶದ ರಾಜನಾದ ಮಿಹಿರ್ ಭೋಜ್ (ಚಂದ್) 9ನೇ ಶತಮಾನದಲ್ಲಿ ಈ ಮೆಟ್ಟಿಲುಬಾವಿಯನ್ನು ನಿರ್ಮಿಸಿದನು ಎನ್ನಲಾಗಿದೆ. ಆದ್ದರಿಂದ ಇದನ್ನು ಚಾಂದ್ ಬಾವರಿ ಎಂದು ಕರೆಯಲಾಗುತ್ತದೆ. ಇನ್ನು ಈ ಬಾವಿಯು 35 ಮೀಟರ್ ಅಗಲವಾಗಿದ್ದು, ಸುವ್ಯವಸ್ಥಿತ ಮೆಟ್ಟಿಲುಗಳನ್ನು ಹೊಂದಿದೆ. ಜೊತೆಗೆ 100 ಅಡಿಗಿಂತಲೂ ಆಳವಾದ ಈ ಮೆಟ್ಟಿಲುಬಾವಿಯು 13 ಮಹಡಿಗಳನ್ನು ಒಳಗೊಂಡಿದ್ದು, ಸುಮಾರು 3,500 ಮೆಟ್ಟಿಲುಗಳನ್ನು ಹೊಂದಿದೆ ಎನ್ನಲಾಗಿದೆ.
ಚಕ್ರವ್ಯೂಹ ಎಂದೂ ಕರೆಯಲಾಗುವ ಚಾಂದ್ ಬಾವರಿ
ಚಾಂದ್ ಬಾವರಿಯನ್ನು ಚಕ್ರವ್ಯೂಹ ಎಂದೂ ಕರೆಯುತ್ತಾರೆ. ಈ ಮೆಟ್ಟಿಲುಬಾವಿಯನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಲಾಗಿದೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಇನ್ನೂ ಆಶ್ಚರ್ಯಕರವಾದ ವಿಷಯವೆಂದರೆ, ಈ ಬಾವಿಯನ್ನು ಮನುಷ್ಯರು ನಿರ್ಮಿಸಿಲ್ಲ, ಬದಲಿಗೆ ದೆವ್ವಗಳು ನಿರ್ಮಿಸಿವೆ ಎಂದು ಸ್ಥಳೀಯರು ನಂಬುತ್ತಾರೆ. ಚಾಂದ್ ಬಾವರಿಯ ಜೊತೆಗೆ ಆಲೂದಾ ಕಿ ಬಾವರಿ ಮತ್ತು ಭಂಡಾರೆಜ್ ಕಿ ಬಾವರಿಗಳನ್ನೂ ಒಂದೇ ರಾತ್ರಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಒಂದು ಸಲ ಒಂದು ಮದುವೆ ಮೆರವಣಿಗೆ ಚಾಂದ್ ಬಾವರಿಯ ಕತ್ತಲೆಯ ಗುಹೆಯೊಳಗೆ ಪ್ರವೇಶಿಸಿತು ಎಂದು ಹೇಳಲಾಗುತ್ತದೆ. ಆದರೆ, ವರನನ್ನು ಒಳಗೊಂಡಂತೆ ಯಾರೂ ಆ ಗುಹೆಯಿಂದ ಹೊರಬರಲಿಲ್ಲ. ಇಡೀ ಮದುವೆ ಮೆರವಣಿಗೆ ಎಲ್ಲಿ ಕಾಣೆಯಾಯಿತು ಎಂಬುದು ಇಂದಿಗೂ ಒಂದು ನಿಗೂಢವಾಗಿಯೇ ಉಳಿದಿದೆ. ಈ ಗುಹೆಯ ಉದ್ದ ಸುಮಾರು 17 ಕಿಲೋಮೀಟರ್ಗಳಾಗಿದ್ದು, ಇದು ಭಂಡಾರೆಜ್ ಗ್ರಾಮದಲ್ಲಿ ಹೊರಹೊಮ್ಮುತ್ತದೆ ಎಂದು ತಿಳಿದುಬಂದಿದೆ.
ಮುಂದುವರೆದು ಹಲವಾರು ದಾಖಲೆಗಳ ಪ್ರಕಾರ, ಚಾಂದ್ ಬಾವರಿಯು ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಮೆಟ್ಟಿಲುಬಾವಿಗಳಲ್ಲಿ ಒಂದಾಗಿದೆ. ಆದರೂ, ಇದರಲ್ಲಿ ಇನ್ನೂ ಅನೇಕ ವಿಶಿಷ್ಟ ಮತ್ತು ರಹಸ್ಯಮಯ ವಿಷಯಗಳಿವೆ. ಯಾವುದೇ ವ್ಯಕ್ತಿಯು ಒಂದೇ ರೀತಿಯ ಮೆಟ್ಟಿಲುಗಳನ್ನು ಬಳಸಿ ಒಂದೇ ಮಾರ್ಗದ ಮೂಲಕ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತದೆ. ಇದಲ್ಲದೆ, ಯಾವುದೇ ವ್ಯಕ್ತಿಯು ಒಂದೇ ಮೆಟ್ಟಿಲಿನ ಮೇಲೆ ಎರಡು ಬಾರಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ. ಈ ವಿಷಯಗಳು ನಂಬಲಸಾಧ್ಯವಾದರೂ ತುಂಬಾ ಕುತೂಹಲಕಾರಿಯಾಗಿವೆ.