Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಕದನ ವಿರಾಮ ಇರಲಿ ಬಿಡಲಿ, ಉಗ್ರರ ವಿರುದ್ಧ ಕ್ರಮ ಅಗತ್ಯ’ – ಓವೈಸಿ

Spread the love

ಹೈದರಾಬಾದ್: ‘ಕದಾನ ವಿರಾಮ ಇರಲಿ ಬಿಡಲಿ ಪಹಲ್ಲಾಮ್ ಭಯೋತ್ಪಾದಕ ದಾಳಿಯ ಹಿಂದಿರುವವರನ್ನು ಭಾರತ ಬೆನ್ನಟ್ಟುವುದನ್ನು ಮುಂದುವರಿಸಬೇಕು’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.

ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾಧಿಕಾರಿ ಭಾಗಿಯಾಗಿರುವ ವಿಡಿಯೋ ವೈರಲ್ ಆಗಿದ್ದು, ಬಹಳ ಟೀಕೆಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟೀಕೆಗಳನ್ನು ಕಡಿಮೆ ಮಾಡಲು ಪಾಕಿಸ್ತಾನ ಸೇನೆಯು ಆತನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಆತ ಉಗ್ರನಲ್ಲ ಎಂದು ತಿಳಿಸಿದೆ.ಪಾಕಿಸ್ತಾನದ ಮಿಲಿಟರಿ ವಕ್ತಾರ ಡಿಜಿ ಐಎಸ್‌ಪಿಆರ್, ಆ ವ್ಯಕ್ತಿ ಕೇವಲ ಒಬ್ಬ ಮುಗ್ಧ ಕುಟುಂಬ ವ್ಯಕ್ತಿ ಮತ್ತು ಒಬ್ಬ ಧರ್ಮ ಪ್ರಚಾರಕ ಎಂದು ಹೇಳಿದ್ದಾರೆ. ಜೊತೆಗೆ ಸುದ್ದಿಗೋಷ್ಠಿಯಲ್ಲಿ ಆ ಉಗ್ರನನ್ನು ಪಕ್ಷದ ಸರಳ ಕಾರ್ಯಕರ್ತ ಎಂದು ಪ್ರತಿಪಾದಿಸಲು ಐಎಸ್‌ಪಿಆರ್ ಪಾಕಿಸ್ತಾನಿ ರಾಷ್ಟ್ರೀಯ ಗುರುತಿನ ಚೀಟಿಯನ್ನು ಸಹ ಪ್ರದರ್ಶನ ಮಾಡಿತು.

ಆಪರೇಷನ್ ಸಿಂಧೂರ ಕುರಿತು ಉನ್ನತ ಮಟ್ಟದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಭಾರತ ನಡೆಸಿದ ಗಡಿಯಾಚೆಗಿನ ನಿಖರ ದಾಳಿಯಲ್ಲಿ ಹತರಾದ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಅಮೆರಿಕದಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮತ್ತು ಎಲ್‌ಇಟಿ ಕಮಾಂಡರ್ ಹಫೀಜ್ ಅಬ್ದುಲ್ ರೌಫ್ ನೇತೃತ್ವ ವಹಿಸುತ್ತಿರುವ ಫೋಟೋವನ್ನು ಕೂಡ ನೀಡಿದ್ದರು.


Spread the love
Share:

administrator

Leave a Reply

Your email address will not be published. Required fields are marked *