ಭವ್ಯಾ ಗೌಡ ವಿರುದ್ಧ ಕಲರ್ಸ್ ಕನ್ನಡ ಕೇಸ್: ‘ಕರ್ಣ’ ಧಾರಾವಾಹಿಗೆ ಸ್ಟೇ ಆರ್ಡರ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಗೀತಾ’ ಸೀರಿಯಲ್ನಲ್ಲಿ ಭವ್ಯಾ ಗೌಡ ಅಭಿನಯಿಸಿದ್ದರು. ‘ಗೀತಾ’ ಮುಗಿದ್ಮೇಲೆ ನೇರವಾಗಿ ಭವ್ಯಾ ಗೌಡ ‘ಬಿಗ್ ಬಾಸ್’ ಮನೆ ಬಾಗಿಲು ತಟ್ಟಿದರು. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಸ್ಪರ್ಧಿಸಿದರು.

ಬಿಗ್ ಬಾಸ್’ ಇಂದ ಭವ್ಯಾ ಗೌಡ ಮನೆ ಮನೆ ಮಾತಾದರು. ಹೆಚ್ಚಿನ ಜನಪ್ರಿಯತೆ ಪಡೆದರು. ‘ಬಿಗ್ ಬಾಸ್’ ಬಳಿಕ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋಗೆ ಭವ್ಯಾ ಗೌಡ ಆಯ್ಕೆಯಾಗಿದ್ದರು. ಆದರೆ ಆ ಶೋಗೆ ಭವ್ಯಾ ಗೌಡ ಹೋಗಲಿಲ್ಲ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀರಿಯಲ್ನಲ್ಲಿ ನಟಿಸುವ ಅವಕಾಶವೂ ಭವ್ಯಾ ಗೌಡ ಅವರನ್ನ ಹುಡುಕಿಕೊಂಡು ಬಂದಿತ್ತು. ಆದರೆ, ಅದನ್ನ ಭವ್ಯಾ ಗೌಡ ಒಪ್ಪಲಿಲ್ಲವಂತೆ. ಅದಾಗಲೇ ಮಾಡಿಕೊಂಡಿದ್ದ ಒಪ್ಪಂದವನ್ನ ಮುರಿದ ಭವ್ಯಾ ಗೌಡ ‘ಕರ್ಣ’ ಧಾರಾವಾಹಿ ಕಡೆ ಮುಖ ಮಾಡಿದರು. ಕರಾರು ಮುರಿದ ಭವ್ಯಾ ಗೌಡ ವಿರುದ್ಧ ಕೋರ್ಟ್ನಲ್ಲಿ ಕೇಸ್ ಹಾಕಲಾಗಿದೆ. ಪರಿಣಾಮ, ಜೂನ್ 16 ರಿಂದ ಆರಂಭವಾಗಬೇಕಿತ್ತು ‘ಕರ್ಣ’ ಧಾರಾವಾಹಿಯ ಪ್ರಸಾರಕ್ಕೆ ಸ್ಟೇ ಆರ್ಡರ್ ಬಂದಿದೆ.
ಕಲಾವಿದರು / ಸ್ಪರ್ಧಿಗಳ ಅಗ್ರೀಮೆಂಟ್ ವಿಚಾರವಾಗಿ ಜೂನ್ 30 ರಂದು ನಡೆದ ‘ಬಿಗ್ ಬಾಸ್ ಕನ್ನಡ 12’ ಪ್ರೆಸ್ಮೀಟ್ನಲ್ಲಿ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರಿಂದ ಪ್ರಶ್ನೆ ತೂರಿಬಂತು. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪ್ರಶಾಂತ್ ನಾಯಕ್ ಏನಂದರು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತು
”ಸ್ಪರ್ಧಿಗಳಿಗೆ ನಾವು ಅಗ್ರೀಮೆಂಟ್ ಶೇರ್ ಮಾಡ್ತೇವೆ. ಒಪ್ಪಿಗೆ ಇದ್ದರೆ ಮಾತ್ರ ಅವರು ಬರಬಹುದು. ನಾವು ಫೋರ್ಸ್ ಮಾಡಲ್ಲ. ಇದು ಅವರ ವೈಯಕ್ತಿಕ ನಿರ್ಧಾರ. ಶೋ ಅಂತ ಬಂದಾಗ ಕೆಲವು ರೂಲ್ಸ್ ನಮ್ಮ ಕಡೆಯಿಂದ ಇರುತ್ತದೆ. ಆ ರೂಲ್ಸ್ಗೆ ಓಕೆ ಇದ್ದರೆ ಮಾತ್ರ ಬರ್ತಾರೆ. ನಾವು ಬಲವಂತವಾಗಿ ಸಹಿ ಹಾಕಿಸಿಕೊಳ್ಳೋದಿಲ್ಲ” ಎಂದು ಪ್ರಶಾಂತ್ ನಾಯಕ್ ಸ್ಪಷ್ಟವಾಗಿ ಹೇಳಿದರು.
