Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಸ್ಸಿನಲ್ಲಿ ಸಿಕ್ಕ ಚಿನ್ನದ ಸರ ಹಿಂದಿರುಗಿಸಿದ ನಿರ್ವಾಹಕ: ಶಶಾಂಕ್ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ

Spread the love

ಸುಳ್ಯ: ಸುಳ್ಯದಿಂದ ಕಾಸರಗೋಡಿನ ಅಡೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಸಿಕ್ಕಿದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬಸ್ಸಿನ ನಿರ್ವಾಹಕ ಶಶಾಂಕ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಮಂಡೆಕೋಲು ಮಾರ್ಗವಾಗಿ ಅಡೂರು ಕಡೆಗೆ ಈ ಬಸ್ಸು ತೆರಳುತ್ತಿತ್ತು. ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕೆಳಗೆಬಿದ್ದು, ಬಸ್ ನಿರ್ವಾಹಕನ ಕೈಗೆ ಸಿಕ್ಕಿದೆ. ಆ ಸರವನ್ನು ಬಸ್ ನಿರ್ವಾಹಕರು ತಮ್ಮ ಮಾಲಕ ಮೋಹನ್ ಗುರೂಜಿ ಅವರಿಗೆ ಒಪ್ಪಿಸಿದರು.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದಾಗ ಸರದ ವಾರಸುದಾರ ಅಡೂರು ಮೂಲದ ಸಿರಾಜುದ್ದೀನ್ ಎಂಬವರು ಸುಳ್ಯಕ್ಕೆ ಬಂದು ಬಸ್ ಚಾಲಕ ಮತ್ತು ನಿರ್ವಾಹಕರಿಂದ ಗುರುತು ಹೇಳಿ ಸರವನ್ನು  ಪಡೆದುಕೊಂಡರು. ನಿರ್ವಾಹಕನ ಪ್ರಾಮಾಣಿಕತೆಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *