Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾಲ ಕೇಳಿದ ಕಾರಣಕ್ಕೆ ಬರ್ಬರ ಹತ್ಯೆ – ಚಿತ್ರದುರ್ಗದಲ್ಲಿ ಯುವತಿಯ ಭಯಾನಕ ಅಂತ್ಯ

Spread the love

ಚಿತ್ರದುರ್ಗ:ಕೊಟ್ಟ ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಯುವತಿಯೋರ್ವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹೊಳಲ್ಕೆರೆಯ ರಾಮಘಟ್ಟ ಗ್ರಾಮದ ಆಶಾ (25) ಮೃತ ದುರ್ದೈವಿ.

ಆಶಾ ಅವರು ಖಾಸಗಿ ಶಾಲೆಯೊಂದರ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. ಈಕೆಯಿಂದ ಅನಿಲಾಸನ್‌ ಎಂಬಾತ 50 ಸಾವಿರ ರೂ. ಸಾಲ ಪಡೆದಿದ್ದ. ಆದರೆ ಸಾಲದ ಹಣ ಮರಳಿಸಿದೇ ಸತಾಯಿಸುತ್ತಿದ್ದ. ಹಲವರ ಸಮ್ಮುಖದಲ್ಲಿ ಈ ಜಗಳ ಇತ್ಯರ್ಥಗೊಂಡು ಅನಿಲಾಸನ್‌ ಹಣ ಮರಳಿಸಬೇಕೆಂದು ತಾಕೀತು ಮಾಡಲಾಗಿತ್ತು.

ಎರಡು ದಿನದ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್‌ ಕೆಂಗುಂಟೆ ಅರಣ್ಯ ಪ್ರದೇಶದ ಬಳಿ ಬರಲು ಹೇಳಿದ್ದ. ಅಲ್ಲಿ ಆಕೆಯನ್ನು ಹತ್ಯೆಗೈಯಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *